Mysore
19
overcast clouds
Light
Dark

ಭೈರತಿ ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ : ಏಕವಚನದಲ್ಲೇ ಎಚ್.ವಿಶ್ವನಾಥ್ ತರಾಟೆ

ಮೈಸೂರು : ಭೈರತಿ ಸುರೇಶ್‌ ಒಬ್ಬ ರಿಯಲ್‌ ಎಸ್ಟೇಟ್‌ ಗಿರಾಕಿ, ಬರಿ ಬೊಗಳೆ ಬಿಡುತ್ತಾನೆ ಎಂದು ಏಕವಚನದಲ್ಲೇ ಭೈರತಿ ಸುರೇಶ್‌ ರನ್ನ ವಿಧಾನ ಪರಿಷತ್‌ ಸದಸ್ಯ ಎಚ್‌ ವಿಶ್ವನಾಥ್‌ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದ ಹಳ್ಳಿಹಕ್ಕಿ, ಹೆಲಿಕಾಷ್ಟರ್‌ ನಲ್ಲಿ ಬಂದು ಪೊಲೀಸ್‌ ಭದ್ರತೆಯಲ್ಲಿ ಸಭೆ ಮಾಡಿ ಹೋಗುತ್ತಾನೆ. ಸಭೆಯ ಬಳಿಕ ಅದು ಕ್ಯಾನ್ಸಲ್‌ ಮಾಡಿದ್ದೀನಿ.  ಅದು ಮಾಡಿದ್ದೀನಿ, ಇದು ಮಾಡಿದ್ದೀನಿ ಎಂದು ಹೇಳ್ತಾನೆ. ಒಂದಕ್ಕಾದ್ರೂ ಆದೇಶ ಬಂದಿದಿಯಾ..? ಬರಿ ಬೊಗಳೆ ಬಿಡುತ್ತಾನೆ. ನೀನು ಯಾವನಲೇ ..? ನೀನು ದಡ್ಡನೋ ಬುದ್ದಿವಂತನಾ..? ನಾನು ಏಳು ಸೈಟ್‌ ಕೇಳಿದ್ದೇನೆ ಅಂತೀಯಲ್ಲ. ಇವ್ನು ಯಾವನ್ರೀ ಎಂದು ಏಕವಚನದಲ್ಲೆ ವಿಶ್ವನಾಥ್‌ ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೆ ನಾನು ಪ್ರಾಮಾಣಿಕ ಅಂತ ವಿಧಾನಸೌಧದ ಒಳಗೆ ಹೇಳಿದ್ದೀನಿ. ಈ ಭೈರತಿ ಸುರೇಶ್  ಚೇಂಜ್‌ ಆಫ್‌ ಲ್ಯಾಂಡ್‌ ಗೆ ಐದು ಲಕ್ಷ ಫಿಕ್ಸ್‌ ಮಾಡಿದ್ದಾನೆ ‌ ಎಂದು ಕಿಡಿಕಾರಿದರು.