Mysore
25
overcast clouds

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ಈ ಬಾರಿ ಬದಲಾವಣೆಗಾಗಿ ಮತ ಹಾಕಿ: ಮತದಾನದ ಬಳಿಕ ಪ್ರಕಾಶ್‌ ರಾಜ್‌ ಕರೆ!

ಬೆಂಗಳೂರು: ಇಂದು ಕರ್ನಾಟಕದಲ್ಲಿ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿರುವ ಬೆನ್ನಲ್ಲೇ ಪಂಚಭಾಷಾ ನಟ ಪ್ರಕಾಶ್‌ ರಾಜ್‌ ಅವರು ಇಂದು ಬೆಂಗಳೂರಿನಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

ಬಳಿಕ ಇನ್ಸ್ಟಾ ಗ್ರಾಂ ನಲ್ಲಿ ಪೋಸ್ಟ್‌ ಒಂದನ್ನು ಮಾಡಿರುವ ನಟ, ಬಿಜೆಪಿ ಹೆಸರೇಳದೇ ಎನ್‌ಡಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ತಾವು ಮತದಾನ ಮಾಡಿರುವುದನ್ನು ಉಲ್ಲೇಖಿಸಿ ಮಾತನಾಡಿ, ಕಳೆದೊಂದು ದಶಕದಲ್ಲಿ ದ್ವೇಷ, ವಿಭಜಕ ರಾಜಕಾರಣವನ್ನು ಕಂಡಿದ್ದೇವೆ. ಇದನ್ನು ಕೊನೆಗಾಣಿಸಲು ನನ್ನ ಹಕ್ಕನ್ನು ಚಲಾಯಿಸಿದ್ದೇನೆ. ನನ್ನನ್ನು ಪ್ರತಿನಿಧಿಸುವವರಿಗೆ ನನ್ನ ಮತ, ಉತ್ತಮ ಅಭ್ಯರ್ಥಿ, ಉತ್ತಮ ಪ್ರಣಾಳಿಕೆಗೆ ನನ್ನ ಮತ ಹಾಕಿದ್ದೇಣೆ ಎಂದು ಹೇಳಿದ್ದಾರೆ.

ಒಂದು ಬದಲಾವಣೆಗಾಗಿ, ಪ್ರಜಾಪ್ರಭುತ್ವದ ಉಳಿವಿಗಾಗಿ ನನ್ನ ಮತ ನೀಡಿದ್ದೇನೆ. ನಮ್ಮಿಂದ ಚುನಾಯಿತರಾಗುವವರು ಸಂಸತ್‌ನಲ್ಲಿ ನಮ್ಮ ಧ್ವನಿಯಾಗಬೇಕು. ಹಾಗಾಗಿ ಎಲ್ಲರೂ ಉತ್ತಮ ಅಭ್ಯರ್ಥಿಗೆ ಮತ ಹಾಕಿ ಎಂದು ಪ್ರಕಾಶ್‌ ವೀಡಿಯೋ ಒಂದನ್ನು ಪೋಸ್ಟ್‌ ಮಾಡಿದ್ದಾರೆ.

Tags:
error: Content is protected !!