Mysore
20
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಕೊನೆಗೂ ಮಗನನ್ನು ನೋಡಲು ಓಡೋಡಿ ಬಂದ ದರ್ಶನ್‌ ತಾಯಿ ಮೀನಾ ತೂಗುದೀಪ್‌

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪದಡಿ ಪರಪ್ಪನ ಅಗ್ರಹಾರದಲ್ಲಿ ಜೈಲು ಕಂಬಿ ಎಣಿಸುತ್ತಿರುವ ನಟ ದರ್ಶನ್‌ರನ್ನು ನೋಡಲು ಇಂದು ತಾಯಿ ಮೀನಾ ತೂಗುದೀಪ್‌ ಹಾಗೂ ಸಹೋದರ ದಿನಕರ್‌ ತೂಗುದೀಪ್‌ ಜೈಲಿಗೆ ಭೇಟಿ ನೀಡಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇಲೆ ನಟ ದರ್ಶನ್‌ ಕಳೆದ ಕೆಲ ದಿನಗಳಿಂದ ಜೈಲುಪಾಲಾಗಿದ್ದಾರೆ. ಜೈಲಿನಲ್ಲಿ ಭಾರೀ ಮುಗ್ದತೆಯಿಂದ ಇರುವ ಅವರಿಗೆ ತಮ್ಮ ತಾಯಿ ಹಾಗೂ ಸಹೋದರನ ನೆನಪು ಕಾಡುತ್ತಿತ್ತು.

ಈ ಹಿನ್ನೆಲೆಯಲ್ಲಿ ತಮ್ಮ ಭೇಟಿಗೆ ತಾಯಿ ಹಾಗೂ ಸಹೋದರ ಬಂದರೆ ಮಾತ್ರ ಅವಕಾಶ ಕಲ್ಪಿಸಿಕೊಡಿ ಎಂದು ಜೈಲು ಅಧಿಕಾರಿಗಳ ಬಳಿ ದರ್ಶನ್‌ ಮನವಿ ಮಾಡಿದ್ದರು. ಸ್ಟೇಷನ್‌ನಲ್ಲಿದ್ದಾಗ ಮನೆಯವರಿಂದ ಅಂತರ ಕಾಯ್ದುಕೊಂಡಿದ್ದ ದರ್ಶನ್‌ನನ್ನು ನೋಡಲು ತಾಯಿ ಹಾಗೂ ತಮ್ಮ ಬಂದಿರಲಿಲ್ಲ.

ಈ ಹಿನ್ನೆಲೆಯಲ್ಲಿ ಇಂದು ತಾಯಿ ಮೀನಾ ತೂಗುದೀಪ್‌ ಹಾಗೂ ಸಹೋದರ ದಿನಕರ್‌ ತೂಗುದೀಪ್‌ ಹಾಗೂ ಪತ್ನಿ ವಿಜಯಲಕ್ಷ್ಮೀ ಅವರು ಜೈಲಿಗೆ ಭೇಟಿ ನೀಡಿ, ದರ್ಶನ್‌ಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ನಟ ದರ್ಶನ್‌ ತಾಯಿ ಹಾಗೂ ಸಹೋದರನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ. ಈ ವೇಳೆ ಪತ್ನಿ ವಿಜಯಲಕ್ಷ್ಮೀ ಕೂಡ ದರ್ಶನ್‌ರನ್ನು ನೋಡಿ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.

Tags:
error: Content is protected !!