Mysore
16
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ರಜನಿಕಾಂತ್ ಚಿತ್ರದಿಂದ ಹೊರಬಂದ ನಿರ್ದೇಶಕ ಸುಂದರ್ ಸಿ

ಒಂದು ವಾರದ ಹಿಂದಷ್ಟೇ, ತಮಿಳು ಚಿತ್ರರಂಗದ ಜನಪ್ರಿಯ ನಟರಾದ ರಜನಿಕಾಂತ್‍ ಮತ್ತು ಕಮಲ್‍ ಹಾಸನ್‍ ಇಬ್ಬರೂ ಹೊಸ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಕಮಲ್‍ ಹಾಸನ್‍ ನಿರ್ಮಾಣದ ಈ ಚಿತ್ರವನ್ನು ಸುಂದರ್ ಸಿ ನಿರ್ದೇಶಿಸಬೇಕಿತ್ತು. ಸ್ವತಃ ಕಮಲ್‍ ಹಾಸನ್‍ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಆದರೆ, ಇದೀಗ ಈ ಚಿತ್ರತಂಡದಿಂದ ಸುಂದರ್‍ ಹೊರಬಂದಿದ್ದಾರೆ.

ಹೌದು, ‘ತಲೈವರ್ 173’ ಚಿತ್ರವನ್ನು ನಿರ್ದೇಶಿಸಬೇಕಿದ್ದ ಸುಂದರ್ ಸಿ, ಆ ಚಿತ್ರ ಶುರುವಾಗುವ ಮೊದಲೇ ಅದರಿಂದ ಹೊರಬಂದಿದ್ದಾರೆ. ಅನಿವಾರ್ಯ ಕಾರಣಗಳಿಂದ ಚಿತ್ರದಿಂದ ಹೊರಬರಬೇಕಾಯಿತು ಎಂದು ಸೋಷಿಯಲ್‍ ಮೀಡಿಯಾದಲ್ಲಿ ಘೋಷಿಸಿದ್ದಾರೆ. ಅಲ್ಲಿಗೆ ರಜನಿಕಾಂತ್ ಅಭಿನಯದ ಚಿತ್ರ ಶುರುವಾಗುವ ಮೊದಲೇ ವಿವಾದಕ್ಕೀಡಾಗಿದೆ.

ಇದನ್ನು ಓದಿ: ನವೆಂಬರ್.14ರಂದು ತೆರೆಮೇಲೆ ಫ್ಯಾಂಟಸಿ ‘ಗತವೈಭವ’

ಹಾಗೆ ನೋಡಿದರೆ, ಈ ಚಿತ್ರದಿಂದ ನಿರ್ದೇಶಕರು ಹೊರಬರುತ್ತಿರುವುದು ಹೊಸದೇನಲ್ಲ. ಮೊದಲಿಗೆ ಈ ಚಿತ್ರವನ್ನು ಲೋಕೇಶ್‍ ಕನಕರಾಜ್‍ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ನಂತರ ನೆಲ್ಸನ್‍ ದಿಲೀಪ್‍ ಕುಮಾರ್ ನಿರ್ದೇಶಿಸುತ್ತಾರೆ ಎಂದು ಹೇಳಲಾಗಿತ್ತು. ಕೊನೆಗೆ ಅವರಿಬ್ಬರನ್ನೂ ಬಿಟ್ಟು, ಸುಂದರ್ ಸಿ ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂದು ಹೇಳಲಾಯಿತು.

ನಟಿ-ರಾಜಕಾರಣಿ ಖುಷ್ಬೂ ಅವರ ಪತಿಯಾಗಿರುವ ಸುಂದರ್, ಈ ಹಿಂದೆ ರಜನಿಕಾಂತ್‍ ಅಭಿನಯದಲ್ಲಿ ‘ಅರುಣಾಚಲಂ’ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರ 1997ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್‍ ಆಗಿತ್ತು. ಇದೀಗ 28 ವರ್ಷಗಳ ನಂತರ ರಜನಿಕಾಂತ್‍ ಅಭಿನಯದಲ್ಲಿ ಸುಂದರ್‍ ಹೊಸ ಚಿತ್ರ ಅವರು ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿ ತಣ್ಣಗಾಗುವ ಮೊದಲೇ ಅವರು ಈ ಚಿತ್ರದಿಂದ ಹೊರಬರುತ್ತಿದ್ದಾರೆ. ಅವರ ಬದಲು ಈ ಚಿತ್ರವನ್ನು ಯಾರು ನಿರ್ದೇಶಿಸಬಹುದು ಎಂಬ ಪ್ರಶ್ನೆ ಕೇಳಿ ಬರುತ್ತಿದ್ದು, ಈ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಈ ಚಿತ್ರವನ್ನು ಕಮಲ್ ಹಾಸನ್ ತಮ್ಮದೇ ನಿರ್ಮಾಣ ಸಂಸ್ಥೆಯಾದ ರಾಜ್‌ ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಕಂಪನಿ ಮೂಲಕ ಚಿತ್ರ ನಿರ್ಮಿಸುತ್ತಿದ್ದಾರೆ. ಈ ಹಿಂದೆ ರಾಜ್‍ ಕಮಲ್‍ ಸಂಸ್ಥೆಯು ಕಮಲ್‍ ಹಾಸನ್‍ ಸೇರಿದಂತೆ ತಮಿಳು ಚಿತ್ರರಂಗದ ಹಲವು ಜನಪ್ರಿಯ ನಟರ ಚಿತ್ರಗಳನ್ನು ನಿರ್ಮಿಸಿತ್ತು. ಇದೇ ಮೊದಲ ಬಾರಿಗೆ ರಜನಿಕಾಂತ್‍ ಅಭಿನಯದ ಚಿತ್ರವನ್ನು ರಾಜ್‍ ಕಮಲ್‍ ನಿರ್ಮಿಸುತ್ತಿದೆ.

Tags:
error: Content is protected !!