ಬೆಂಗಳೂರು: ನಿಮಗೆಲ್ಲಾ ಡಿಬಾಸ್, ಆ ಡಿಬಾಸ್ ನನಗೆ ಮಗ ನೆನಪಿಟ್ಟುಕೊಳ್ಳಿ. ಇನ್ನೆರಡು ತಿಂಗಳಲ್ಲಿ ದರ್ಶನ್ ಹೊರಬರುತ್ತಾರೆ ಎಂದು ನಟ ರವಿಚಂದ್ರನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಮಾತನಾಡಿದ ನಟ ರವಿಚಂದ್ರನ್ ಅವರು, ಡಿಬಾಸ್ ಅಭಿಮಾನಿಗಳ ಕುರಿತು ಮಾತನಾಡಿದ್ದಾರೆ.
ಒಂದು ಕೆಟ್ಟ ಘಳಿಗೆ ಅದು. ಕೆಟ್ಟ ಘಳಿಗೆ ಮನಸ್ಸನ್ನು ಕುಗ್ಗಿಸುತ್ತದೆ. ಅಷ್ಟು ಆಳಕ್ಕೆ ಕರೆದೊಯ್ದು ಕುಗ್ಗಿಸಬೇಕಾದರೆ ಯಾವತ್ತೋ ಒಮ್ಮೆ ಎಬ್ಬಿಸಲೇಬೇಕಾಗುತ್ತದೆ ಅಲ್ವಾ? ಅದಕ್ಕೆ ಎಲ್ಲರೂ ಕಾಯೋಣ. ಎಲ್ಲರೂ ಪ್ರೀತಿಯಿಂದ, ಮನಸ್ಸಿಂದ ಹೃದಯದಲ್ಲಿ ಪೂಜೆ ಮಾಡಿ ಬರ್ತಾರೆ ಎಂದು ಮನವಿ ಮಾಡಿದರು.





