ಜೂನ್ ಸಮೀಪಿಸುತ್ತಿದ್ದಂತೆ ಶಾಲೆ ಪುನಾರಂಭಗೊಳ್ಳುವ ಸಂಭ್ರಮ ಎಲ್ಲೆಡೆ ಕಾಣಿಸುತ್ತದೆ. ಸರ್ಕಾರಿ ಶಾಲೆಗಳನ್ನು ಅವಲಂಬಿಸಿರುವ ಮಕ್ಕಳು ಶಾಲೆಗಳಲ್ಲಿ ಕೊಡುವ ಪುಸ್ತಕ, ಸಮವಸಕ್ಕಾಗಿ ಕಾಯುತ್ತಿರುತ್ತಾರೆ. ಕೆಲವು ಬಾರಿ ಶಾಲೆ ತೆರೆದು ತಿಂಗಳಾದರೂ ಮಕ್ಕಳು ಅನೇಕ ಸೌಲಭ್ಯಗಳಿಂದ ವಂಚಿತರಾಗುವುದರ ಜತೆಗೆ ಪಠ್ಯಪುಸ್ತಕ ಸಿಗದ ಕಾರಣ ಓದುವ ಆಸಕ್ತಿ ಕಳೆದುಕೊಳ್ಳುತ್ತಾರೆ. ಜೂನ್ ವೇಳೆಯಲ್ಲಿ ಮಳೆ ಹೆಚ್ಚಾಗಿರುವುದರಿಂದ ಮಕ್ಕಳಿಗೆ ರೈನ್ ಕೋಟ್ ಜೊತೆಗೆ ಛತ್ರಿಯನ್ನು ವಿತರಿಸಿದರೆ ಅನುಕೂಲವಾಗುತ್ತದೆ. ಅಲ್ಲದೇ ಶಾಲೆ ಪುನಾರಂಭಗೊಳ್ಳುವ ಕೆಲವು ದಿನಗಳ ಮುಂಚೆ ಮುಖ್ಯ ಶಿಕ್ಷಕರು ಶಾಲೆಗಳನ್ನು ಪರಿಶೀಲಿಸಿ ಸ್ವಚ್ಛಗೊಳಿಸಲು ಕ್ರಮ ವಹಿಸಿ ಪೂರ್ವ ಸಿದ್ಧತೆಯನ್ನು ಕೈಗೊಳ್ಳಬೇಕು.
– ಎಂ. ಎಸ್. ಉಷಾ ಪ್ರಕಾಶ್, ಎಸ್. ಬಿ. ಎಂ. ಕಾಲೋನಿ, ಮೈಸೂರು.





