ಮಹಾರಾಷ್ಟ್ರ ರಾಜ್ಯದ ಸೌಂದಾಳ ಗ್ರಾಮವು ದೇಶದಲ್ಲೇ ಮೊದಲ ಜಾತಿ ಮುಕ್ತ ಮನಸ್ಸುಳ್ಳ ಗ್ರಾಮ ಎಂಬ ಕೀರ್ತಿಯನ್ನು ಗಳಿಸಿ ನಮ್ಮ ಸಮಾಜಕ್ಕೆ ಮಾದರಿಯಾಗಿದೆ.
ಜಾತಿ, ಧರ್ಮ, ಮೇಲು, ಕೀಳು ಎಂಬ ತಾರತಮ್ಯದ ಜೋಪಡಿಯಲ್ಲಿ ಜೀವಿಸುವ ಈ ಅನಿಷ್ಠ ಜಾತಿ ಪದ್ಧತಿಯ ಆಚಾರಕ್ಕೆ ಸೌಂದಾಳ ಗ್ರಾಮಸ್ಥರು ವಿರುದ್ಧವಾಗಿದ್ದಾರೆ. ಗ್ರಾಮದ ಎಲ್ಲಾ ಸಮುದಾಯದವರು ಸೇರಿಕೊಂಡು ನಮ್ಮದು ಒಂದೇ ಜಾತಿ ಅದು ಮನುಷ್ಯ ಜಾತಿ ಎಂಬ ಧೈಯವಾಕ್ಯದೊಂದಿಗೆ ವಿನೂತನ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಯಾವುದೇ ಜಾತಿ ಆಧಾರಿತ ಘಟನೆಗಳು ಮತ್ತು ಪದ್ಧತಿಗಳು ನಡೆದ ರೀತಿಯಲ್ಲಿ ಸರ್ವಾನುಮತದಿಂದ ಗ್ರಾಮಸ್ಥರು ಒಗ್ಗಟ್ಟಾಗಿ ನಿಂತು ಸಂವಿಧಾನದ ಮೂಲ ಆಶಯವೇ ನಮ್ಮ ಬದುಕು ಹಾಗೂ ಸಮಾನತೆ ನಮ್ಮ ಜೀವನದ ಬೆಳಕು ಎಂಬುದನ್ನು ನಿರ್ಣಯಿಸಿದ್ದು, ಸೌಂದಾಳ ಗ್ರಾಮ ಜಾತಿ ಮುಕ್ತ ಮನಸ್ಸುಗಳನ್ನು ಕಟ್ಟಿದೆ.
– ಪವನ್ ಜಯರಾಂ, ಸಿದ್ದಯ್ಯನಪುರ, ಚಾಮರಾಜನಗರ





