ಬೆಂಗಳೂರಿನ ಹೃದಯಭಾಗದ 32 ಎಕರೆ ವಿಸ್ತೀರ್ಣದಲ್ಲಿ ಪ್ರಾಜೆಕ್ಟ್ ಮೆಜೆಸ್ಟಿಕ್ ಅಡಿಯಲ್ಲಿ ಸಿಂಗಾಪುರ ಮಾದರಿಯ ಇಂಟರ್ ಮಾಡೆಲ್ ಟ್ರಾನ್ಸಿಟ್ ಹಬ್ ನಿರ್ಮಿಸುವ ಸರ್ಕಾರದ ನಿರ್ಧಾರ ದೂರದೃಷ್ಟಿಯುಳ್ಳದ್ದು. ಕೇವಲ ಸಿಮೆಂಟ್ ಕಾಮಗಾರಿಯಾಗದೆ ಇದು 8 ಎಕರೆ ಮೆಟ್ರೋ ಮತ್ತು ಉಳಿದ ಬಿಎಂಟಿಸಿ-ಕೆಎಸ್ಆರ್ಟಿಸಿ ಜೀರೋ-ಡಿಸ್ಟೆನ್ಸ್ ಸಂಪರ್ಕ ಕಲಿಸುವ ತಾಂತ್ರಿಕ ಕ್ರಾಂತಿಯಾಗಬೇಕು.
ಪ್ರತಿ ನಿತ್ಯ ಲಕ್ಷಾಂತರ ಪ್ರಯಾಣಿಕರು ಸಂಚರಿಸುವ ಈ ಕೇಂದ್ರದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಟ್ರಾಫಿಕ್ ನಿರ್ವಹಣೆ ಮತ್ತು ಸಂಪೂರ್ಣ ಸೌರಶಕ್ತಿ ಬಳಕೆ ಅತ್ಯಗತ್ಯ. ಕೇವಲ ವಾಣಿಜ್ಯ ಲಾಭಕ್ಕೆ ಒತ್ತು ನೀಡದೆ ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ಸುಸಜ್ಜಿತ ವಿಶ್ರಾಂತಿ ಗೃಹಗಳು ಮತ್ತು ಕನ್ನಡಿಗರ ಕಲೆ-ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ವೇದಿಕೆಯಾಗಲಿ, ಈ ಯೋಜನೆಯು ಮುಂದಿನ 50 ವರ್ಷಗಳ ಜನಸಂಖ್ಯೆಯ ಒತ್ತಡವನ್ನು ತಡೆದುಕೊಳ್ಳುವ ಸುಸ್ಥಿರ ಯೋಜನೆಯಾಗಲಿ. ಡಾ. ಎಚ್. ಕೆ. ವಿಜಯಕುಮಾರ್, ಬೆಂಗಳೂರು





