Mysore
21
overcast clouds

Social Media

ಶನಿವಾರ, 18 ಜುಲೈ 2026
Light
Dark

ಓದುಗರ ಪತ್ರ | ಸಮಸ್ಯೆಗಳ ನಿವಾರಣೆಗೆ ವಿಭಜನೆ ಮದ್ದೇ?

dgp murder case

ಸಮಸ್ಯೆಗಳ ನಿವಾರಣೆ ಮತ್ತು ಸುಗಮ ಆಡಳಿ ತಕ್ಕೆ ಅನುಕೂಲವಾಗಲಿ ಎಂದು ಬಿಬಿಎಂಪಿಯನ್ನು ಏಳು ಪಾಲಿಕೆಗಳನ್ನಾಗಿ ವಿಭಜಿಸಿಕೊಂಡು ಗ್ರೇಟರ್ ಬೆಂಗಳೂರು ಅಥವಾ ಮಹಾ ಬೆಂಗಳೂರನ್ನು ನಿರ್ಮಿಸಲು ಸರ್ಕಾರ ಮುಂದಾಗಿರುವುದು ಶ್ಲಾಘನೀಯ.

ಆದರೆ, ಸರ್ಕಾರದ ನಡೆಯನ್ನು ಮುಂದಿಟ್ಟುಕೊಂಡು ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಕರ್ನಾಟಕ ಭಾಗಗಳಲ್ಲೂ ಪ್ರತ್ಯೇಕತೆಯ ಮತ್ತು ವಿಭಜನೆಯ ಕೂಗು ಎದ್ದರೆ ಅದಕ್ಕೆ ಯಾರು ಹೊಣೆ? ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಪ್ರತ್ಯೇಕವಾಗಬೇಕು ಎಂಬ ಕೂಗು ಆಗೊಮ್ಮೆ ಈಗೊಮ್ಮೆ ಕೇಳಿಬರುತ್ತಿದ್ದು, ಇತ್ತೀಚೆಗೆ ಕರಾವಳಿ ಭಾಗದ ಶಾಸಕರೊಬ್ಬರು ಮಂಗಳೂರಿನಲ್ಲಿ ವಿಧಾನಸೌಧ ನಿರ್ಮಿಸುವ ಬಗ್ಗೆ ಮಾತನಾಡಿದ್ದಾರೆ.

ಸರ್ಕಾರ ಯಾವುದೇ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳುವಾಗ ಅದರ ದೂರಗಾಮಿ ಪರಿಣಾಮದ ಬಗೆಗೆ ಯೋಚಿಸಬೇಕು. ಒಡೆದು ಆಳುವುದು ಅಥವಾ ವಿಭಜನೆ ಮಾಡುವುದು ಎಂದಿಗೂ ಮಾರಕ ಎನ್ನುವುದನ್ನು ಆಡಳಿತಾರೂಢ ಸರ್ಕಾರ ಸದಾ ನೆನಪಿನಲ್ಲಿಟ್ಟುಕೊಳ್ಳ ಬೇಕು. ಒಂದು ರೋಗಕ್ಕೆ ನೀಡುವ ಚಿಕಿತ್ಸೆ ಇನ್ನೊಂದು ಮಹಾರೋಗಕ್ಕೆ ಕಾರಣವಾಗಬಾರದು.-ರಮಾನಂದ ಶರ್ಮಾ, ಜೆ. ಪಿ. ನಗರ, ಬೆಂಗಳೂರು.

Tags:
error: Content is protected !!