Mysore
22
broken clouds

Social Media

ಬುಧವಾರ, 08 ಏಪ್ರಿಲ 2026
Light
Dark

ಓದುಗರ ಪತ್ರ | ಬಸವರಾಜ ಬೊಮ್ಮಾಯಿ ನಿರ್ಧಾರ ಸ್ವಾಗತಾರ್ಹ

ಹಾವೇರಿ ವಿಶ್ವವಿದ್ಯಾಲಯವು ತಮಗೆ ಪ್ರಕಟಿಸಿದ್ದ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿರುವುದು ಸ್ವಾಗತಾರ್ಹವಾಗಿದೆ.

ಹಲವು ರಾಜಕಾರಣಿಗಳು ವಿವಿಯ ಗೌರವ ಡಾಕ್ಟರೇಟ್‌ಗಳಿಗೆ ಲಾಬಿ ಮಾಡುತ್ತಿರುವ ಕಾಲದಲ್ಲಿ,ಬೊಮ್ಮಾಯಿ ಅವರು ತಮಗೆ ಹಾವೇರಿ ವಿಶ್ವವಿದ್ಯಾಲಯ ನೀಡುತ್ತಿರುವ ಗೌರವ ಪದವಿಯನ್ನು ನಯವಾಗಿ ತಿರಸ್ಕರಿಸಿರುವುದು ರಾಜಕಾರಣಿಗಳಿಗೊಂದು ಮಾದರಿಯ ನಡೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಸರ್ಕಾರದ ಅಧಿನದಲ್ಲಿರುವ ಬಹುತೇಕ ವಿಶ್ವವಿದ್ಯಾನಿಲಯಗಳು ರಾಜಕಾರಣಿಗಳಿಗೆ, ಮಂತ್ರಿ ಮಹೋದಯರಿಗೆ, ಜನಪ್ರಿಯ ಚಲನಚಿತ್ರ ತಾರೆಯರಿಗೆ, ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡುತ್ತಿವೆ. ಇವರಲ್ಲಿ ಅರ್ಹರಿಗಿಂತ ಅನರ್ಹರ ಪಾಲೇ ಹೆಚ್ಚಾಗಿರುತ್ತದೆ. ವಿವಿಧ ಕ್ಷೇತ್ರದ ನಿಜವಾದ ಗಣ್ಯ ಸಾಧಕರನ್ನು ಗುರುತಿಸದೇ ಇರುವುದು ಬೇಸರದ ಸಂಗತಿಯಾಗಿದೆ.

ಬಸವರಾಜ ಬೊಮ್ಮಾಯಿ ಅವರ ನಿಲುವನ್ನು ಉಳಿದ ರಾಜಕಾರಣಿಗಳು ಮತ್ತು ಉದ್ಯಮಿಗಳು ತಾಳುವುದು ಅಗತ್ಯ. ಇನ್ನು ಮುಂದಾದರೂ ವಿವಿಗಳು ಗೌರವ ಡಾಕ್ಟರೇಟ್ ಮತ್ತು ‘ನಾಡೋಜ’ ಪದವಿಯನ್ನು ರಾಜಕಾರಣಿಗಳು, ಚಿತ್ರನಟರನ್ನು ಹೊರತುಪಡಿಸಿ ವಿವಿಧ ಕ್ಷೇತ್ರಗಳಲ್ಲಿ ಎಲೆ ಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸಿ ನೀಡುವುದು ಔತ್ಯ.

-ಟಿ. ಸತೀಶ್ ಜವರೇಗೌಡ, ಮಂಡ್ಯ

 

Tags:
error: Content is protected !!