Mysore
27
clear sky

Social Media

ಸೋಮವಾರ, 16 ಫೆಬ್ರವರಿ 2026
Light
Dark

‘ಕ್ರಮಬದ್ಧ ಜಾತಿ ಗಣತಿ ನಡೆಸಿ’

ಓದುಗರ ಪತ್ರ

ಓದುಗರ ಪತ್ರ…

ರಾಜ್ಯ ಸರ್ಕಾರ ನಡೆಸಿರುವ ಜಾತಿ ಗಣತಿ ಪೂರ್ಣಪ್ರಮಾಣದಲ್ಲಿ ಆಗಿಲ್ಲ. ಸಮೀಕ್ಷೆ ನಡೆಸುವ ಮುನ್ನ ವ್ಯಾಪಕ ಪ್ರಚಾರ ಮಾಡಿ ಜನಜಾಗೃತಿ ಮೂಡಿಸಿ ಯಾವುದೇ ಒಂದು ಕುಟುಂಬವೂ ಸಮೀಕ್ಷೆಯಿಂದ ಹೊರಗುಳಿಯದಂತೆ ಸಮೀಕ್ಷೆ ಮಾಡಬೇಕು. ಪ್ರಸ್ತುತ ಆಗಿರುವ ಜಾತಿ ಸಮೀಕ್ಷೆ ನಾಮಕಾವಸ್ತೆ ಜಾತಿ ಸಮೀಕ್ಷೆ ಆಗಿದೆ. ‘ಬಂದ ಪುಟ್ಟ ಹೋದ ಪುಟ್ಟ’ ಎಂಬಂತಾಗಿದೆ.

ಈ ಹಿನ್ನೆಲೆಯಲ್ಲಿ ಜಾತಿ ಸಮೀಕ್ಷೆ ಕ್ರಮಬದ್ಧವಾಗಿ ಆಗಲಿ, ಈ ಸಮೀಕ್ಷೆಯಿಂದ ಯಾವ ಒಂದು ಕುಟುಂಬವು ಹೊರಗುಳಿಯದಂತೆ ಕಟ್ಟುನಿಟ್ಟಾದ ಸಮೀಕ್ಷೆ ನಡೆಸಿ ತಾಲ್ಲೂಕುವಾರು, ವಲಯವಾರು ಪ್ರಕಟಿಸಿ ಆಕ್ಷೇಪಣೆಗೆ ಒಂದು ತಿಂಗಳ ಕಾಲಾವಕಾಶ ನೀಡಬೇಕು. ನಂತರ ಅಂತಿಮವಾಗಿ ಜಾತಿ ಪಟ್ಟಿಯನ್ನು ಬಿಡುಗಡೆ ಮಾಡಬೇಕು. ಬಳಿಕ ಮೀಸಲಾತಿ ಪ್ರಕಟಿಸಬೇಕು. ಯಾವುದೇ ಜಾತಿ, ಯಾವುದೇ ಧರ್ಮಕ್ಕೂ ಅನ್ಯಾಯವಾಗದಂತೆ ಸಾಮಾಜಿಕ ನ್ಯಾಯದಡಿ ಮೀಸಲಾತಿ ನಿಗದಿಪಡಿಸಬೇಕು. ಅಪೂರ್ಣ, ಅವೈಜ್ಞಾನಿಕ ಜಾತಿ ಸಮೀಕ್ಷೆ ವರದಿಯನ್ನು ಸರ್ಕಾರ ಹಿಂಪಡೆಯಬೇಕು.

  • ಬಿ. ಜಿ. ರಂಗೇಗೌಡ, ಮೈಸೂರು.
Tags:
error: Content is protected !!