Mysore
22
broken clouds
Light
Dark

ಹಳತಾಯಿತು ಹೊಸಪೇಟೆ

  ನಾನು ಕನ್ನಡ ವಿಶ್ವವಿದ್ಯಾನಿಲಯದ ನೌಕರಿಗೆಂದು ಹೊಸಪೇಟೆಗೆ ಬಂದಿಳಿದಾಗ ಬಸ್ ನಿಲ್ದಾಣದಲ್ಲಿ ಗೋಡೆಯ ಮೇಲೆ ಯಾರೊ ಅವಸರದಲ್ಲಿ ಬರೆದುಹೋದ ‘ಸಂಘಟನೆ ಸೇರಿರಿಹೂಸನಾಡ ಕಟ್ಟಿರಿ’ ಘೋಷಣೆ ಕಣ್ಣಿಗೆ ಬಿತ್ತುಬಸ್ ನಿಲ್ದಾಣದ ಎದುರು ಸಾಲಾಗಿ ನಿಂತ ಸೈಕಲ್ ರಿಕ್ಷಾಗಳುಊರ ನರನಾಡಿಗಳಂತೆ ಹರಿಯುತ್ತಿದ್ದ ಕೆನಾಲುಗಳಲ್ಲಿ ತೇಲುವ ಬಾಳೆಕಂಬಮಾವಿನಸೊಪ್ಪುಹಳೆಯಬಟ್ಟೆಪ್ಲಾಸ್ಟಿಕ್‌ಬಾಟಲಿದಡದಲ್ಲಿ ಬೆತ್ತಲೆ ಈಜಾಡುವ ಹುಡುಗರುಬಟ್ಟೆ ಸೆಣೆವ ಜನರಸ್ತೆಯಲ್ಲಿ ಬೀಡುಬಿಟ್ಟ ದನಇವುಗಳ ಪಟ ತೆಗೆವ ವಿದೇಶಿಯರುಗೊದ್ದಗಳಂತೆ ಹರಿವ ಟಿಪ್ಪರುಗಳುಐದು ನಿಮಿಷದಲ್ಲಿ ಉಟ್ಟ ಬಟ್ಟೆಯನ್ನು ಕೆಂಪಿಸುವ ದೂಳುಗುಬ್ಬಿಕಾಗೆಕೋತಿನಾಯಿಗಳೂ ಬಣ್ಣಗೆಟ್ಟಿದ್ದವು.

ವಿಜಯನಗರ ಕಾಲದ ಹಳ್ಳಿಯಾಗಿದ್ದು ಸದ್ಯ ಹೊಸಪೇಟೆಯ ಬಡಾವಣೆಯಾಗಿರುವ ಚಿತ್ತವಾಡಿಗಿಯಲ್ಲಿ ಮನೆ ಹಿಡಿದೆವುಮನೆ ಮುಂದೆ ಯೂನಿಯನ್ ಜಾಕ್ ಗುರುತಿನ ಗವಾಕ್ಷಗಳಿರುವ ಬ್ರಿಟಿಷರ ಕಾಲದ ಹೈಸ್ಕೂಲುಮದರಾಸು ಸರ್ಕಾರದ ಗವರ್ನರ್ ಸರ್ ಜಾರ್ಜ್ ಸ್ಟಾ ನ್ಲಿ ಅದನ್ನು ಉದ್ಘಾಟಿಸಿದ್ದನುಮನೆಯ ಹೊಸಲಿಗೆ ಹತ್ತಿಕೊಂಡಂತಿದ್ದ ಸ್ಟೇಷನ್ ರಸ್ತೆಯಲ್ಲಿ ಅದಿರಿನ ಲಾರಿಗಳು ಎದೆಯ ಮೇಲೆ ಏರಿಬಂದಂತೆ ಹರಿಯುತ್ತಿದ್ದವುಲೋಬಾನದ ಹೊಗೆಯಂತೆ ದೂಳು ಮನೆಯೊಳಗೆ ನುಗ್ಗುತ್ತಿತ್ತುಪಕ್ಕದಲ್ಲಿದ್ದ ಸಕ್ಕರೆ ಕಾರ್ಖಾನೆ ಕಾಕಂಬಿಯ ವಾಸನೆ ಮತ್ತು ಹಾರುಬೂದಿಯನ್ನು ಉಚಿತವಾಗಿ ಹಂಚುತ್ತಿತ್ತುಕನ್ನಡಕ್ಕಿಂತ ಹೆಚ್ಚು ಕೇಳಿಬರುವ ತೆಲುಗುನೀರಿಲ್ಲದೆ ಒಣಗಿದ ಗಿಡಮರಗಳಿಂದ ಪಾಳುಸುರಿವ ಪಾರ್ಕುಪತ್ರಿಕೆಗಳಲ್ಲಿ ಮನೆಗಳ್ಳತನದ ನಿತ್ಯವಾರ್ತೆನಿರಂಕುಶ ಮತಿಗಳಾಗಿ ಎಲ್ಲಿಬೇಕಲ್ಲಿ ಮಲಮೂತ್ರ ವಿಸರ್ಜಿಸುವ ಮಂದಿಬಾನು ‘ಇದೇನೊ ಈ ಊರು ಹಿಂಗೆ’ ಎಂದು ಕಂಗಾಲಾದಳು.

ಸ್ವಲ್ಪ ತಾಳ್ಮೆಯಿಂದ ನಿಧಾನಕ್ಕೆ ಗಮನಿಸಿದೆವುಇನ್ನೊಂದು ಮುಖ ಕಂಡಿತುಉತ್ತರಕ್ಕೆ ತುಂಗಾಭದ್ರಾ ನದಿಹಂಪಿ ಬೆಟ್ಟಸಾಲು ಹಾಗೂ ದಕ್ಷಿಣಕ್ಕೆ ಸೊಂಡೂರು ಬೆಟ್ಟಗಳ ನಡುವಿನ ಸುಂದರ ಕಣಿವೆಯಲ್ಲಿ ಊರಿತ್ತುಸುತ್ತಮುತ್ತವಿದ್ದ ಭತ್ತಕಬ್ಬುಬಾಳೆ ಬೆಳೆವ ಗದ್ದೆಹಸಿರು ತುಂಬಿದ ಗುಡ್ಡಬೆಟ್ಟಬಂಡೆಗಳ ಸಂದಿನಲ್ಲಿ ಹರಿವ ತುಂಗಭದ್ರೆಸಾಗರದಂತೆ ಮಲೆತುನಿಂತ ಡ್ಯಾಮು ಅಕ್ಕರೆ ಹುಟ್ಟಿಸಿದ್ದವುಜನ ಮಾತುಮಾತಿಗೂ ‘ಮಿಂಡ್ರಿಗೆ ಹುಟ್ಟಿದೋನೆ’ ಎಂದರೂ ಹೃದಯವಂತರುಊರ ಹೆಬ್ಬಾಗಿಲಲ್ಲೇ ಕಾವಲು ಗೋಪುರದಂತೆ ಜೋಳದರಾಶಿಯ ಆಕರ್ಷಕ ಬೆಟ್ಟನೀರಾವರಿ ದಿಸೆಯಿಂದ ಜೋಳದ ಬೆಳೆ ಕಳೆದುಕೊಂಡು ಅನ್ನಬ್ಯಾಳಿ ಪ್ರಮುಖ ಆಹಾರವಾಗಿತ್ತುಒಗ್ಗಾಣಿ ಮಿರ್ಚಿ ಆಕರ್ಷಕ ತಿಂಡಿಯಾಗಿತ್ತುಪ್ರಶಾಂತ್ ಖಾನಾವಳಿ ಎಂಬ ಪರ್ಣಕುಟಿಯಲ್ಲಿ ಶ್ರೇಷ್ಠ ರೊಟ್ಟಿಯೂಟ ಸಿಗುತ್ತಿತ್ತುಮಲ್ಲಿಗೆ ಬಿಟ್ಟರೆ ದೊಡ್ಡ ಹೋಟೆಲುಗಳಿರಲಿಲ್ಲ.

ಪಟ್ಟಣದ ಮಧ್ಯೆ ಬಾಣದಕೇರಿಚಿತ್ರಗೇರಿಮ್ಯಾಸಗೇರಿಉಕ್ಕಡಗೇರಿ ಎಂಬ ಏಳು ಕೇರಿಗಳಿದ್ದುವಿಜಯನಗರ ಕಾಲದ ಹಳ್ಳಿಯನ್ನು ನೆನಪಿಸುತ್ತಿದ್ದವುಅಲ್ಲಿ ಮಾನವಮಿ ಆಚರಣೆಗಳು ವಿಶಿಷ್ಟವಾಗಿದ್ದವುದಸರಾದ ಪಲ್ಲಕ್ಕಿಗಳಲ್ಲಿ ಕೇರಿಯ ದೇವಿಯರನ್ನು ಹೊತ್ತು ಧರ್ಮದಗುಡ್ಡದ ಚೆನ್ನಬಸವಣ್ಣನ ಗವಿಗೆ ತರುಣರು ಓಡುತ್ತಿದ್ದರುಮೊಹರಮ್ಮಿನಲ್ಲಿ ಮಕ್ಕಳಿಗೆ ಹರಕೆಯ ಹುಲಿವೇಷ ಹಾಕಿಸುತ್ತಿದ್ದರುಮೊಹರಂ ದೇವರೂ ಭರಮಪ್ಪನೂ ಒಂದೇ ಗುಡಿಯಲ್ಲಿ ವಾಸಇಲ್ಲಿನ ಮೊಹರಂ ದೇವರಿಗೆ ರಾಮನಮಲಿ ಸ್ವಾಮಿ ಎಂಬ ಹೆಸರಿತ್ತುಈ ಹೆಸರಿನ ಮುಸ್ಲಿಮರೂ ಇದ್ದರುಕೂಗಳತೆ ದೂರದಲ್ಲಿದ್ದ ಹೊಸೂರು ಬಸವನದುರ್ಗ ಸಂಕಲಾಪುರ ಹುಲಿಗಿ ಕೊಂಡನಾಯಕನಹಳ್ಳಿಮಲಪನಗುಡಿಗಾಳೆಮ್ಮನಗುಡಿಗಳು ವರ್ಷವಿಡೀ ಒಂದಲ್ಲಾ ಒಂದು ಉತ್ಸವದಲ್ಲಿ ತೊಡಗಿದ್ದವು. ‘ರಕ್ತರಾತ್ರಿ’ ನಾಟಕ ಹಳ್ಳಿಗಳಲ್ಲಿ ಸಾಮಾನ್ಯವಾಗಿತ್ತುಮರಿಯಮ್ಮನಹಳ್ಳಿ ರಂಗಭೂಮಿಯ ತವರಾಗಿತ್ತುರಂಗಭೂಮಿಯ ಜೋಳದರಾಶಿ ದೊಡ್ಡನಗೌಡಸುಭದ್ರಮ್ಮ ಮನ್ಸೂರನಾಗರತ್ನಮ್ಮತೊಗಲುಬೊಂಬೆಯ ಬೆಳಗಲ್ ವೀರಣ್ಣದೊಡ್ಡಭರಮಪ್ಪಗೊಂದಲಿಗ ದೇವೇಂದ್ರಪ್ಪ ಮೊದಲಾದ ಕಲಾವಿದರಿದ್ದರುಮುದೇನೂರ ಸಂಗಣ್ಣಚಂದ್ರಶೇಖರ ಶಾಸ್ತ್ರಿಕುಂವೀಎಸ್.ಎಸ್.ಹಿರೇಮಠಬಸವರಾಜ ಮಲಶೆಟ್ಟಿ ಮೊದಲಾದ ಲೇಖಕರಿದ್ದರುಬ್ರಿಟಿಷರ ಕಾಲದಲ್ಲಿ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಹೊಸಪೇಟೆಯಲ್ಲಿ ಸ್ವಾತಂತ್ರ್ಯ ಚಳವಳಿಯ ನೆನಪಿನಂತೆ ಗಾಂಧಿಪಾರ್ಕುನೆಹರೂ ಕಾಲೋನಿಪಟೇಲ್ ನಗರಗಳಿದ್ದವುಮದರಾಸು ಸರ್ಕಾರದಲ್ಲಿ ಮಂತ್ರಿಯಾಗಿದ್ದಆ ಕಾಲದಲ್ಲೇ ಅಮೆರಿಕಕ್ಕೆ ಹೋಗಿ ಪಿಎಚ್ಡಿಮಾಡಿದ್ದ ನಾಗನಗೌಡರ ನೆನಪುಗಳಿದ್ದವುಹಂಪಿಗೆ ಶ್ರವಣದಲ್ಲಿ ಎಲ್ಲೆಡೆಯಿಂದ ಭಜನಾ ಮಂಡಳಿಗಳು ಬರುತ್ತಿದ್ದವುಬಹುತೇಕ ಮುಸ್ಲಿಮರು ಸೂಫಿಮೊಹರಂ ಪರಂಪರೆಗೆ ನಡೆದುಕೊಳ್ಳುವರುಮೊಹರಂ ಹಾಡಿಕೆಯಿತ್ತುಸೂಫಿಸಂತ ಮೀರಾಲಂ ಹೆಸರಿನಲ್ಲಿ ಬಸ್ಸು ಥಿಯೇಟರು ಇದ್ದವುಸಂತನ ಉರುಸಿಗೆ ಹಾಡಿಕೆ ಮಾಡಲು ಅಕ್ಕಲಕೋಟೆಯಿಂದ ಗಾಯಕರು ಬರುತ್ತಿದ್ದರುಕೆಂಪಾವಧೂತಕೆಂಚಾವಧೂತ ಆಶ್ರಮಗಳಲ್ಲಿ ಅಮಾವಾಸ್ಯೆಹುಣ್ಣಿಮೆಗೆ ಭಜನೆ ನಡೆಯುತ್ತಿತ್ತುಬಳ್ಳಾರಿ ಮೈಲಾರ ಹುಲಿಗೆ ಹಂಪಿಯಲ್ಲಿ ಈ ಸೀಮೆಯ ದೊಡ್ಡ ಜಾತ್ರೆಗಳಾಗಿದ್ದವುಹಂಪಿಸೀಮೆ ಸಾಂಸ್ಕೃ ತಿಕವಾಗಿ ಸಮೃದ್ಧವಾಗಿತ್ತುಭೌಗೋಳಿಕವಾಗಿ ಕರ್ನಾಟಕಕ್ಕೆ ಹೊಸಪೇಟೆ ಕೇಂದ್ರವಾಗಿತ್ತುನಿಧಾನಕ್ಕೆ ಅಳುಕಿನಿಂದಲೇ ಬೇರುಬಿಟ್ಟೆವು.

ಮುಂದೆ ನಾವು ಅನಂತಶಯನ ಗುಡಿ ಸಮೀಪ ಮನೆ ಹಿಡಿದೆವುಕದ ತೆಗೆದರೆ ಜಂಬುನಾಥನ ಬೆಟ್ಟಆದರೆ ಮಧ್ಯಾಹ್ನ ಜ್ವಾಲಾಮುಖಿ ಆಸ್ಛೋಟಿಸಿದಂತೆ ಬ್ಲಾಸ್ಟ್ ಆಗುತ್ತಿತ್ತುಕಿಟಕಿಯ ಗಾಜುಗಳು ಸಶಬ್ದವಾಗಿ ಕಂಪಿಸುತ್ತಿದ್ದವುಕೆಂದೂಳು ಆಗಸಕ್ಕೆ ಅಡರುತ್ತಿತ್ತುಮನೆಯಿಂದ ನೂರು ಮಾರು ದೂರದಲ್ಲಿ ಹೊಳೆಯೋಪಾದಿಯಲ್ಲಿ ಬಲದಂಡೆ ಕಾಲುವೆಅದಕ್ಕೆ ತಗುಲಿದಂತೆ ಭತ್ತತೆಂಗುಬಾಳೆಯ ತೋಟಗದ್ದೆನೀರಾವರಿ ಪ್ರದೇಶವಾದ್ದರಿಂದ ಕಾಯಿಪಲ್ಲೆ ಸೋವಿಮುನೀರಾಬಾದಿನ ತೋಟಗಳಿಂದ ಸೀಬೆಹಗರಿ ದಡದಿಂದ ಬರುತ್ತಿದ್ದ ಜಾಮ್ಕೊಪ್ಪಳದ ಕಡೆಯಿಂದ ಬರುತ್ತಿದ್ದ ಸೌತೆಕೂಡ್ಲಿಗಿ ಜರಿಮಲೆ ಕಾಡಿನಿಂದ ಬರುತ್ತಿದ್ದ ಸೀತಾಫಲ ಮಾರುಕಟ್ಟೆಯಲ್ಲಿ ಇಟ್ಟಾಡುತ್ತಿದ್ದವುಇಲ್ಲಿಗೆ ಬಂದ ಬಳಿಕವೇ ನಾವು ಅಕ್ಕರಿಕೆಪಲ್ಲೆ ಕರ್ಚಿಕಾಯಿ ತಿಂದಿದ್ದುಬಾನುಗೆ ಮಿರಿಮಿರಿ ಮಿಂಚುವ ಕರಿಹಸಿರು ವರ್ಣದ ರಾಯದುರ್ಗದ ಬದನೆ ಬಹಳ ಇಷ್ಟವಾಯಿತುಎಳೆಯ ಕುರಿಮಾಂಸಕಮಲಾಪುರ ಕೆರೆಯ ತಾಜಾಮೀನು ಸಿಗುತ್ತಿತ್ತುಊರ ಸುತ್ತಮುತ್ತ ಆಲೆಮನೆಗಳಿಂದ ಪಾಕದ ಸುವಾಸನೆಮೂರು ಮೈಲಿಯ ಕಾಳಘಟ್ಟಕ್ಕೆ ಹೋದರೆ ಹೊಳೆಮೊಸಳೆಗಳಾಡುವ ಗಂಗಮ್ಮನ ಮಡುಹಂಪಿಗೆ ಹೋಗಿ ಮತಂಗ ಪರ್ವತಅದನ್ನು ಹತ್ತಿದರೆ ಕಾಣುವ ಚಕ್ರತೀರ್ಥಅಂಜನಾದ್ರಿಋಷ್ಯಮೂಕಸೂಳೆಬಜಾರುದೂಳುಬಿಸಿಲು ಜತೆ ನಂಟು ಬೆಳೆಯಿತುಹಂಪಿ ಉತ್ಸವವು ಪರ್ಯಾಯ ದಸರೆಯಂತಾಯಿತುನಿಧಾನವಾಗಿ ಬೇರುತಳೆದವುಆಪ್ತತೆ ಅಮಲಿನಂತೆ ಆವರಿಸತೊಡಗಿತು.

ಇದಕ್ಕೆ ಪೂರಕವಾಗಿ ಹೊಸಪೇಟೆ ಚಹರೆ ಬದಲಾಯಿತುಹಂಪಿ ಉತ್ಸವಜಿಂದಾಲ್ ಕಾರ್ಖಾನೆಕನ್ನಡ ವಿಶ್ವವಿದ್ಯಾನಿಲಯಗಳಿಗೆ ಜನ ವಲಸೆ ಬಂದರುವಿಲಾಸಿ ಹೋಟೆಲು ಹೆಚ್ಚಿದವುಪಾಳುಬಿದ್ದ ರಾಮುಲು ಪಾರ್ಕು ನಂದನವನವಾಯಿತುಕಾಲುವೆಗಳು ಚಂದಗೊಂಡವುರಸ್ತೆಗಳು ಅಗಲವಾದವುರೈಲ್ವೆ ಸ್ಟೇಷನ್ನಿನಲ್ಲಿ ಮೈನಿಂಗ್ ಲೋಡಿಂಗ್ ನಿಲ್ಲಿಸಿದ್ದರಿಂದ ಟಿಪ್ಪರುಗಳು ನುಗ್ಗುವುದು ನಿಂತಿತುದೂಳಡಗಿತುಬಿಡಾಡಿ ನಾಯಿ ದನಗಳ ಕಾಟ ಮುಂದುವರಿಯಿತುಸಕ್ಕರೆ ಕಾರ್ಖಾನೆ ನಿಂತುಮಸಿದುರ್ವಾಸನೆಗಳಿಂದ ವಿಮೋಚನೆ ಸಿಕ್ಕಿತುಆದರೆ ಕಬ್ಬುಬೆಳೆವ ರೈತರಿಗೆ ಕಷ್ಟವಾಯಿತುಆರಂಭದಲ್ಲಿದ್ದ ಕಮ್ಯುನಿಸ್ಟ್ ಚಳವಳಿ ಕ್ಷೀಣವಾಯಿತುಹನುಮಮಾಲೆಯವರು ಹೆಚ್ಚಿದರುಊರನಡುವಿನ ಸುಂದರ ಗದ್ದೆಗಳೆಲ್ಲ ಪ್ಲಾಟುಗಳಾದವುನಡುವೆ ಶಾಸಕರ ಅರಮನೆ ಎದ್ದುನಿಂತಿತುಸಂಜೆಯಾದರೆ ಓಡಾಡಲು ಭಯವಾಗುತ್ತಿದ್ದ ಕಾಲೇಜು ರಸ್ತೆಪಾಶಾದ ಶಾಪಿಂಗ್ ಮಾಲುಗಳಿಂದ ಝಗಮಗಿಸತೊಡಗಿತುಬಿರಿಯಾನಿ ಡೋನರ್‌ಕಬಾಬ್ ಹೋಟೆಲು ಆಗಮಿಸಿದವುಪಾಶ್ ಹೋಟೆಲುಗಳು ತಲೆಯೆತ್ತಿದವುಹೊಸಪೇಟೆ ಬಳ್ಳಾರಿಯಿಂದ ಬಿಡಿಸಿಕೊಂಡು ವಿಜಯನಗರ ಜಿಲ್ಲೆಯ ಕೇಂದ್ರವಾಯಿತುಬದುಕು ತುಸು ತುಟ್ಟಿಯಾಯಿತು.

ಮೂರು ದಶಕಗಳಲ್ಲಿ ಹೊಸಪೇಟೆ ಎಷ್ಟೊಂದು ಬದಲಾಯಿತುಆತಂಕಸಂಭ್ರಮ ಹುಟ್ಟಿಸಿದ್ದ ಅಪರಿಚಿತವೆನಿಸಿದ್ದ ಹೊಸಪೇಟೆ ಈಗ ನಮ್ಮ ಪಾಲಿಗೆ ಹಳೆಪೇಟೆನಿವೃತ್ತಿಯ ಬಳಿಕ ಸಾಹಿತ್ಯ ಸಂಗೀತ ರಂಗಭೂಮಿ ಚಳವಳಿ ಚಟುವಟಿಕೆಗಳಿರುವ ಧಾರವಾಡಕ್ಕೊ ಶಿವಮೊಗ್ಗಕ್ಕೊ ಮೈಸೂರಿಗೊ ಹೋಗಬೇಕೆಂದು ಮನ ತುಡಿಯುತ್ತದೆ.

 

ಇದರ ವಾಸನೆ ಹತ್ತಿದ ಗೆಳೆಯರು ತಮ್ಮೂರುಗಳಲ್ಲಿ ಸೈಟು ಮನೆ ಹುಡುಕಿ ಸ್ವಾಗತಿಸಿದ್ದುಂಟುಬಾನು ಮಾತ್ರ ‘ನಾನಿಲ್ಲೇ ಇರ‍್ತೀನಿನೀನು ಬೇಕಾದರೆ ಹೋಗುವಾರಕ್ಕೊಮ್ಮೆ ಬಂದು ಹೋಗಬಹುದುಆಕಾಶ ಕಳಚಿ ಬೀಳುವುದಿಲ್ಲ’ ಎಂದಳುಶಿವಮೊಗ್ಗ ಬಿಟ್ಟು ಬರುವಾಗ ಅತ್ತವಳುಇದೇನೊ ಈ ಊರು ಹಿಂಗೆ ಎಂದು ಅಣಕಿಸಿದವಳುಇವಳೆಯೇಆಕೆಗೆ ಗೊತ್ತು ಸಾಕಿದ ದನ ಹೊರಗಟ್ಟಿದರೂ ಸಂಜೆ ಮನೆಗೆ ಬರುತ್ತದೆಂದುಜೀವನದ ಹೆಚ್ಚು ಭಾಗ ಕಳೆವ ಊರು ನಮ್ಮದೇ ಆಗಿಬಿಡುತ್ತದೆಬೆಳೆದ ಮರ ಹೊಸನೆಲದಲ್ಲಿ ನಾಟಿ ಹಾಕಿದರೆ ಚಿಗುರುವುದೂ ಕಷ್ಟಬಾನುಗೆ ಹೇಳಿದೆ. ‘ಇಲ್ಲಿನ ಖಬರಸ್ಥಾನದಲ್ಲಿ ಗಿಡಮರಗಳು ಇವೆಒಳ್ಳೇ ನೆರಳಿದೆಮಲಗಬಹುದುಎಂಥ ಮಾತಾಡ್ತೀಯ?’ ಎಂದು ಎಚ್ಚರಿಸಿದಳು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ