Mysore
27
overcast clouds

Social Media

ಭಾನುವಾರ, 14 ಜೂನ್ 2026
Light
Dark

HD ಕೋಟೆ : ಊರಿನತ್ತ ಕಾಡಾನೆ, ಗ್ರಾಮಸ್ಥರಲ್ಲಿ ಆತಂಕ, ಹಲವು ಮನೆಗಳಿಗೆ ಹಾನಿ

ಮೈಸೂರು :  ಹೆಚ್‌ ಡಿ ಕೋಟೆ ತಾಲ್ಲೂಕಿನ ಬೂದನೂರು ಗ್ರಾಮಕ್ಕೆ ಇಂದು ಬೆಳಿಗ್ಗೆ ಏಕಾಏಕಿ ಕಾಡಾನೆಯೊಂದು ನುಗ್ಗಿದ್ದು, ಗ್ರಾಮಸ್ಥರಲ್ಲಿ ಕೆಲಕಾಲ ಆತಂಕವನ್ನುಂಟು ಮಾಡಿದ್ದಲ್ಲದೆ ಮನೆಗಳನ್ನು ಹಾನಿ ಮಾಡಿದೆ.

alt=”” width=”300″ height=”190″>ಗ್ರಾಮದತ್ತ ಬಂದ ಕಾಡಾನೆಯನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದರು ಇದನ್ನು ಕಂಡ ಕಾಡಾನೆ ಗ್ರಾಮದೆಲ್ಲಡೆ ಗಾಬರಿಯಿಂದ ಅತ್ತಿಂದಿತ್ತ ಓಡಾಡಿ ಮನೆಗಳನ್ನು ಕೆಡವಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ಲಾಗುತ್ತಿದ್ದು,

ವಿಡಿಯೋದಲ್ಲಿ ಗ್ರಾಮದ ಜನರು ಆನೆಯನ್ನು ಓಡಿಸಲು ಕಲ್ಲುಗಳನ್ನು ಎಸೆಯುತ್ತಿರುವ ದೃಶ್ಯ ಸೆರೆಯಾಗಿದೆ. ಕೊನೆಗೂ ಗ್ರಾಮಸ್ಥರು ಆನೆಯನು ಊರಿನಿಂದ ಹೊರಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!