ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಹೊಸಹಳ್ಳಿ ಹಾಡಿಯ ಗಿರಿಜನ ವ್ಯಕ್ತಿ ಕರಿಯಪ್ಪನ ಹತ್ಯೆಗೆ ಸಂಬಂಧಪಟ್ಟಂತೆ ಶನಿವಾರದಿಂದ ಸಿಐಡಿ ತನಿಖೆ ಆರಂಭವಾಗಿದೆ.
ಡಿವೈಎಸ್ಪಿ ರವಿಪ್ರಸಾದ್ ಅವರಿಂದ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪಡೆದ ಸಿಐಡಿ ಡಿಎಸ್ಪಿ ಗೋಪಾಲಕೃಷ್ಣ ಅವರು ಪರಿಶೀಲನೆ ಮಾಡಿದ್ದು, ಭಾನುವಾರ ಪ್ರಕರಣ ನಡೆದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ. ಡಿಎಸ್ಪಿ ಸೇರಿದಂತೆ ಐದು ಜನರ ತಂಡ ತನಿಖೆ ನಡೆಸಲಿದೆ.





