Mysore
23
overcast clouds
Light
Dark

ಮರ ಕಡಿದ ಗುತ್ತಿಗೆದಾರನ ವಿರುದ್ಧ FIR ದಾಖಲು

ಮೈಸೂರು : ರಸ್ತೆ ಕಾಮಗಾರಿ ವೇಳೆ ಮರ ಕಡಿದವರ ವಿರುದ್ಧ FIR ದಾಖಲು ಮಾಡಲಾಗಿದೆ. ನಗರದ ಮೇಟಗಳ್ಳಿ ಬಡಾವಣೆಯ ಮಥುರಾನಗರದಲ್ಲಿ ಮೂಡ ಇಲಾಖೆಯವರು ರಸ್ತೆ ಕಾಮಾಗಾರಿ ಮಾಡುವಾಗ ಕಾನೂನು ಬಾಹಿರವಾಗಿ  ಶ್ರೀಗಂಧದ ಮರ ಮತ್ತು ಇತರೆ 5 ಮರಗಳನ್ನ ಕಡಿದಿದ್ದರು.

ಈ ಸಂಬಂಧವಾಗಿ ಅರಣ್ಯ ಇಲಾಖೆಗೆ ದೂರು ಸಲ್ಲಿಸಲಾಗಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಅಧಿಕಾರಿಗಳು ಮರಗಳನ್ನ ವಶಕ್ಕೆ ಪಡೆದು ಸಂಬಂಧಪಟ್ಟ ಗುತ್ತಿಗೆದಾರರಾದ ಶ್ರೀರಂಗಪಟ್ಟಣ ಮೂಲದ ಲಕ್ಷ್ಮಗೌಡ ಎಂಬುವವರ ಮೇಲೆ FIR ದಾಖಲು ಮಾಡಲಾಗಿದೆ ಎಂದು ಪರಿಸರ ಹೋರಾಟಗಾರ್ತಿ ಭಾನು ಮೋಹನ್ ತಿಳಿಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ