ಮೈಸೂರು : ರಸ್ತೆ ಕಾಮಗಾರಿ ವೇಳೆ ಮರ ಕಡಿದವರ ವಿರುದ್ಧ FIR ದಾಖಲು ಮಾಡಲಾಗಿದೆ. ನಗರದ ಮೇಟಗಳ್ಳಿ ಬಡಾವಣೆಯ ಮಥುರಾನಗರದಲ್ಲಿ ಮೂಡ ಇಲಾಖೆಯವರು ರಸ್ತೆ ಕಾಮಾಗಾರಿ ಮಾಡುವಾಗ ಕಾನೂನು ಬಾಹಿರವಾಗಿ ಶ್ರೀಗಂಧದ ಮರ ಮತ್ತು ಇತರೆ 5 ಮರಗಳನ್ನ ಕಡಿದಿದ್ದರು.
ಈ ಸಂಬಂಧವಾಗಿ ಅರಣ್ಯ ಇಲಾಖೆಗೆ ದೂರು ಸಲ್ಲಿಸಲಾಗಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಅಧಿಕಾರಿಗಳು ಮರಗಳನ್ನ ವಶಕ್ಕೆ ಪಡೆದು ಸಂಬಂಧಪಟ್ಟ ಗುತ್ತಿಗೆದಾರರಾದ ಶ್ರೀರಂಗಪಟ್ಟಣ ಮೂಲದ ಲಕ್ಷ್ಮಗೌಡ ಎಂಬುವವರ ಮೇಲೆ FIR ದಾಖಲು ಮಾಡಲಾಗಿದೆ ಎಂದು ಪರಿಸರ ಹೋರಾಟಗಾರ್ತಿ ಭಾನು ಮೋಹನ್ ತಿಳಿಸಿದ್ದಾರೆ.