Mysore
21
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಸರಗೂರು: ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಕಾಡಾನೆಗಳ ಹಿಂಡು

ಸರಗೂರು: ೫ ಕಾಡಾನೆಗಳ ಗುಂಪೊಂದು ಪ್ರತ್ಯೇಕ್ಷವಾಗಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ತಾಲ್ಲೂಕಿನ ನುಗು ಹಿನ್ನೀರು ಸಮೀಪ ಹೊಸಬಿರ್ವಾಳು ಗ್ರಾಮ ಹಾಗೂ ಮುಳ್ಳೂರು ಗ್ರಾಮದ ಹೊರವಯದಲ್ಲಿ ನಡೆದಿದೆ.
ತಾಲ್ಲೂಕು ಬಂಡೀಪುರ ವನ್ಯಜೀವಿ ವಲಯದಿಂದ ನುಗು ಜಲಾಶಯದ ಹಿನ್ನೀರಿನ ಮಾರ್ಗವಾಗಿ ಕಾಡಿನಿಂದ ಆಚೆ ಬಂದ ೫ ಕಾಡಾನೆಗಳ ಗುಂಪೊಂದು ಹೊಸಬಿರ್ವಾಳು ಮತ್ತು ಮುಳ್ಳುರು ಗ್ರಾಮದ ನಡುವಿನ ಬೆಟ್ಟದ ತಪ್ಪಲಿನ ಕಬ್ಬಿನ ಗದ್ದೆಯನ್ನು ಸೇರಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಬುಧವಾರ ಬೆಳಗ್ಗೆ ೭ ಗಂಟೆಗೆ ೫ ಆನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಯ ಮಾಹಿತಿಯನ್ನು ನೀಡಿದ್ದಾರೆ. ಕೂಡಲೇ ಸ್ತಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆನೆಗಳನ್ನು ಕಾಡಿಗೆ ಓಡಿಸಲು ಸಾಕಷ್ಟು ಶ್ರಮಿಸಿದಾದರೂ ಆನೆಗಳು ಪಕ್ಕದ ಕಬ್ಬಿನ ಗದ್ದೆಯನ್ನು ಸೇರಿಕೊಂಡಿವೆ.

ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟ ಕಾಡಾನೆಗಳು: ಕಾಡಿನಿಂದ ಹೊರಬಂದ ಆನೆಗಳ ಗುಂಪು ಕಬ್ಬಿನ ಗದ್ದೆಯನ್ನು ಸೇರಿ ರಾಗಿ ಇತರ ಬೆಳೆಗಳು ಸೇರಿದಂತೆ ಕಬ್ಬನ್ನು ಬೆಳೆಗಳನ್ನು ನಾಶ ಮಾಡಿವೆ ಎಂದು ರೈತರು ಆತಂಕ ಹೊರಹಾಕಿದ್ದಾರೆ. ಆನೆಗಳನ್ನು ಕಾಡಿಗೆ ಓಡಿಸಲು ಅರಣ್ಯ ಅಧಿಕಾರಿಗಳು ಗನ್ ಹಿಡಿದು, ಪಟಾಕಿಗಳನ್ನು ಸಿಡಿಸಿ ಓಡಿಸಲು ಪ್ರಯತ್ನಿಸಿದ್ದಾರೂ ಎರಡು ಭಾರಿ ಆನೆಗಳು ಗದ್ದೆಯಿಂದ ಹೊರ ಬಂದು ಹೋಗಲು ಯತ್ನಿಸಿದಾಗ ತಂಡೋಪ ತಂಡವಾಗಿ ಆನೆಗಳನ್ನು ನೋಡಲು ಬಂದ ಜನರ ಕಿರುಚಾಟದ ಸದ್ದನಿಂದ ಮತ್ತೇ ಆನೆಗಳು ಗದ್ದೆಯನ್ನು ಸೇರಿವೆ ಎನ್ನಲಾಗಿದೆ.

ಕಾಡಾನೆಗಳು ಆಹಾರ ಹುಡುಕುತ್ತಾ ಮುಳ್ಳೂರು ಬೆಟ್ಟದಿಂದ ಹೊಸ ಬಿರ್ವಾಳು ಕಡೆ ಬಂದಿವೆ. ಇವುಗಳನ್ನು ಕಾಡಿಗೆ ಓಡಿಸಲು ನಾವು ಮತ್ತು ನಮ್ಮ ಸಿಬ್ಬಂದಿ ಸಾಕಷ್ಟು ಪಯತ್ನ ಮಾಡಿದ್ದೇವೆ. ಆದರೆ ಸಾಕಷ್ಟು ಆನೆಗಳು ಕಾಡಿಗೆ ಹೋಗದೆ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿವೆ. ರಾತ್ರಿ ಜನರ ಸಂಖ್ಯೆ ಕಡಿಮೆ ಆದ ನಂತರ ಕಾಡಾನೆಗಳನ್ನು ಓಡಿಸಲು ಪ್ರಯತ್ನಿಸಲಾಗುವುದು.
ನಿವೇದಿತಾ, ವಲಯ ಅರಣ್ಯಾಧಿಕಾರಿ, ನುಗು ವನ್ಯಜೀವಿ ವಲಯ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!