ಮೈಸೂರು :ಸಂಸದ ಪ್ರತಾಪ್ ಸಿಂಹ ಅವರು ಇಂದು ಐಪಿಎಲ್ ಛೇರ್ಮನ್ ಬ್ರಿಜೇಶ್ ಪಟೇಲ್ ಮತ್ತು ಕೆಎಸ್ಸಿಎ ಸೆಕ್ರೆಟರಿ ಸಂತೋಷ್ ಮೆನನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಮೈಸೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ಸ್ಥಾಪನೆಗೆ 20 ಎಕರೆ ಜಾಗ ಕೊಡಿಸುವಂತೆ ಮನವಿ ಮಾಡಿದ್ದರೆ. ಇದಕ್ಕೆ ಒಪ್ಪಿಗೆ ನೀಡಿರುವ ಅವರು ಶೀಘ್ರದಲ್ಲೇ ಜಾಗ ಕೊಡಿಸುವ ಬಗ್ಗೆ ಭರವಸೆ ನೀಡಿದ್ದಾರೆ.
ಮೈಸೂರಿನ ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆಯುತ್ತಿರುವ ‘ ಮಹಾರಾಜ ಟ್ರೋಫಿ’ ಕೆ.ಎಸ್.ಸಿ.ಎ ಟಿ20 Hubli Tigers vs Shivamogga Strikers ನಡುವಿನ ಪಂದ್ಯಾವಳಿಯನ್ನು ವೀಕ್ಷಿಸಲಾಯಿತು. ಈ ಸಂದರ್ಭದಲ್ಲಿ ಬ್ರಿಜೇಶ್ ಪಟೇಲ್ಸ, ಸಂತೋಷ್ ಮೆನನ್ ಹಾಗೂ ಸಂತೋಷ್ ರೈ ಉಪಸ್ಥಿತರಿದ್ದರು.