Mysore
28
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಮೈಸೂರಿನಲ್ಲೂ ಶೋಧ ಕಾರ್ಯ ಕೈಗೊಳ್ಳಲು ಪ್ರತಾಪ್‌ ಸಿಂಹ ಒತ್ತಾಯ 

ಮೈಸೂರು: ನಗರದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ಕೊಡುವ ಗುಮಾನಿ ಇರುವುದರಿಂದ ನಗರದ ಕೆಲವು ಪ್ರದೇಶಗಳಲ್ಲಿ ಕೂಬಿಂಗ್ ಅಪರೇಷನ್ ಮಾಡಬೇಕಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯ ಪ್ರತಾಪ್ ಸಿಂಹ ಹೇಳಿದರು.

ಕುಕ್ಕರ್‌ಬ್ಲಾಸ್ ಆಗಿದೆ ಅಂತ ಪೊಲೀಸರು ಸುಮ್ಮನಿರದೆ ಅನುಮಾನಪಟ್ಟು ತನಿಖೆಗೆ ಇಳಿದ ಮೇಲೆ ಬಾಂಬ್ ಸ್ಫೋಟಿಸುವ ಸಂಚು ನಡೆದಿತ್ತು ಎನ್ನುವ ಮಾಹಿತಿ ಕೇಳಿಬಂದಿತ್ತು. ಹಾಗಾಗಿ, ನಗರದಲ್ಲಿ ಅಶಾಂತಿ ಹುಟ್ಟಿಸುವ ಕೆಲಸಕ್ಕೆ ಕೈ ಹಾಕಿರುವ ಶಕ್ತಿಗಳನ್ನು ಮಟ್ಟ ಹಾಕಬೇಕಾಗಿದೆ ಎಂದು ತಿಳಿಸಿದರು.

೨೦೧೧ರಲ್ಲಿ ಹುಣಸೂರಿನ ವಿದ್ಯಾರ್ಥಿಗಳಿಬ್ಬರನ್ನು ಅಪಹರಣ ಮಾಡಿ ಒತ್ತೆಯಾಳಾಗಿ ಇಟ್ಟುಕೊಂಡು ಹಣ ಕೊಡದಿದ್ದಮೇಲೆ ಹತ್ಯೆ ಮಾಡಲಾಯಿತು. ೨೦೧೫ರಲ್ಲಿ ಕ್ಯಾತಮಾರನಹಳ್ಳಿ ರಾಜು ಹತ್ಯೆ, ಶಾಸಕ ತನ್ವೀರ್‌ಸೇಠ್ ಕೊಲೆಯತ್ನ,ಕೊಡಗಿನ ಕುಟ್ಟಪ್ಪ ಹತ್ಯೆ,ಮಂಗಳೂರಿನ ಪ್ರವೀಣ್‌ಪೂಜಾರಿ ಹತ್ಯೆ ಪ್ರಕರಣಗಳಲ್ಲಿ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ಕೈವಾಡವಿರುವುದು ಸಾಬೀತಾಗಿದೆ ಎಂದು ಆರೋಪಿಸಿದರು.

ದಕ್ಷಿಣಕನ್ನಡ ಭಾಗದಲ್ಲಿ ನಡೆಯುತ್ತಿದ್ದ ಹತ್ಯೆಗಳನ್ನು ಮೈಸೂರಿಗೂ ವಿಸ್ತರಿಸುವ ಸಂಚು ನಡೆದಿದೆ.ಈಗ ಮಾನವ ಬಾಂಬ್ ಸ್ಫೋಟಿಸುವ ಕೃತ್ಯದಲ್ಲಿ ತೊಡಗಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಶಾಂತಿನಗರ, ಗೌಸಿಯಾನಗರ, ಕಲ್ಯಾಣಗಿರಿ,ರಾಜೀವ್‌ನಗರ ಭಾಗಗಳಲ್ಲಿಕೂಬಿಂಗ್ ಅಪರೇಷನ್ ಮಾಡಿ ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ನಿಗಾ ಇಡಬೇಕು ಎಂದು ಒತ್ತಾಯಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!