Mysore
30
few clouds

Social Media

ಸೋಮವಾರ, 02 ಫೆಬ್ರವರಿ 2026
Light
Dark

ಗ್ರಾಪಂ ಆವರಣದಲ್ಲಿ ಕಸದ ರಾಶಿ ಸುರಿದು ಪ್ರತಿಭಟನೆ

ಗುಂಡ್ಲುಪೇಟೆ : ಗ್ರಾಮಪಂಚಾಯಿತಿಯ ಅಸಮರ್ಪಕ ಕಾರ್ಯವೈಖರಿಯಿಂದ ಬೇಸತ್ತ ಗ್ರಾಮಸ್ಥರು ಹಾಗೂ ರೈತ ಮುಖಂಡರು ಗ್ರಾಮದ ಬೀದಿಗಳಲ್ಲಿದ್ದ ಕಸದ ರಾಶಿಯನ್ನು ತಾವೆ ಎತ್ತಿನ ಗಾಡಿಯಲ್ಲಿ ತುಂಬಿಕೂಂಡು ಬಂದು ಗ್ರಾಮಪಂಚಾಯಿತಿ ಆವರಣದಲ್ಲಿ ಸುರಿದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ ಗ್ರಾಪಂ ಅಧ್ಯಕ್ಷರ ವಿರುದ್ದ ಪ್ರತಿಭಟನೆ ನಡೆಸಿದ ಘಟನೆ ಕೋಟೆಕೆರೆ ಗ್ರಾಮದಲ್ಲಿ ನಡೆದಿದೆ.

ಬೇಗೂರು ಸಮೀಪದ ಕೋಟೆಕೆರೆ ಗ್ರಾಮದಲ್ಲಿ ಸುಮಾರು 3 ಸಾವಿರ ಜನಸಂಖ್ಯೆಯಿದ್ದು ಸುಮಾರು 7 ಗ್ರಾಮಗಳು ಈ ಗ್ರಾಮಪಂಚಾಯಿತಿಗೆ ಸೇರಿದ್ದು ಪ್ರತಿವರ್ಷದಂತೆ ಈ ವರ್ಷವು ಸಹ ಗ್ರಾಮಗಳಲ್ಲಿ ಗ್ರಾಮದೇವತೆ ಹಬ್ಬ ಆಚರಿಸುವ ವಾಡಿಕೆಯಿದ್ದು ತುಂಬ ಸಾಂಪ್ರದಾಯಕವಾಗಿ ಶ್ರದ್ದಾ ಭಕ್ತಿಬಾವದಿಂದ ಮನೆ ಹಾಗೂ ಮನೆಯ ಅಂಗಳವನ್ನೆಲ್ಲ ಸಿಂಗರಿಸಿ ಹಬ್ಬ ಆಚರಿಸುತ್ತಾರೆ ಅಷ್ಟೆ ಅಲ್ಲದೆ ಅಕ್ಕ ಪಕ್ಕದ ಗ್ರಾಮಗಳಿಂದಲು ಸಹ ಭಕ್ತಾಧಿಗಳು ಹಬ್ಬಕ್ಕೆ ಬಂದು ತಾಯಿಗೆ ಪೂಜೆ ಸಲ್ಲಿಸಿ ನಂತರ ನೆಂಟರ ಮನೆಗೆ ಓತಣಕೂಟ್ಟಕ್ಕೆ ಬರುವುದು ವಾಡಿಕೆ,

ಈ ಸಂಭ್ರಮದಲ್ಲಿರಬೇಕಾದ ಗ್ರಾಮಸ್ಥರು ಇಂದು ಮನೆಯ ಮುಂಭಾಗವಿರುವ ಕಸದ ರಾಶಿಯಿಂದ ಬೆಸತ್ತು ಅದರ ದುರ್ವಾಸನೆ ತಾಳಲಾರದೆ ಬಂದ ನೆಂಟರಿಷ್ಟರಿಗೂ ಗ್ರಾಮದ ಅನೈರ್ಮಲ್ಯದ ದರುಶನ ಮಾಡಿಸಿದಂತಾಗಿದ್ದು. ಈ ಹಿಂದೆಯೇ ಅನೇಕ ಬಾರಿ ಗ್ರಾಮಪಂಚಾಯಿತಿಗೆ ಈ ವಿಚಾರವಾಗಿ ಕಸತೆಗೆಸುವಂತೆ ದೂರಿದ್ದರು ಸಹ ಗ್ರಾಪಂ ಅಧ್ಯಕ್ಷ ಹಾಗೂ ಪಿ.ಡಿ.ಒ ಈ ಬಗ್ಗೆ ಯಾವುದೆ ಕ್ರಮಕೈಗೂಳ್ಳದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಎಡೆಮಾಡಿಕೂಟ್ಟಿದೆ. ಹಬ್ಬಮುಗಿಸಿದ ಗ್ರಾಮಸ್ಥರು ಕಸದ ರಾಶಿಯನ್ನು ಎತ್ತಿನ ಗಾಡಿಯಲ್ಲಿ ತುಂಬಿ ಗ್ರಾಪಂ ಆವರಣದಲ್ಲಿ ಸುರಿದು ಪ್ರತಿಭಟನೆ ನಡೆಸಿದ್ದಾರೆ.
ಅಊಓ೮ಃಉಖ೩ ಬೇಗೂರು ಸಮೀಪದ ಕೋಟೆಕೆರೆ ಗ್ರಾಪಂ ನ ಆವರಣದಲ್ಲಿ ಕಸಸುರಿದು ಪ್ರತಿಭಟನೆ ನಡೆಸಿದ ಗ್ರಾಮಸ್ಥರು
ಬೇಗೂರು ಸಮೀಪದ ಕೋಟೆಕೆರೆ ಗ್ರಾಮದಲ್ಲಿ ಸುಮಾರು ೩ ಸಾವಿರ ಜನಸಂಖ್ಯೆಯಿದ್ದು ಸುಮಾರು ೭ ಗ್ರಾಮಗಳು ಈ ಗ್ರಾಮಪಂಚಾಯಿತಿಗೆ ಸೇರಿದ್ದು ಪ್ರತಿವರ್ಷದಂತೆ ಈ ವರ್ಷವು ಸಹ ಗ್ರಾಮಗಳಲ್ಲಿ ಗ್ರಾಮದೇವತೆ ಹಬ್ಬ ಆಚರಿಸುವ ವಾಡಿಕೆಯಿದ್ದು ತುಂಬ ಸಾಂಪ್ರದಾಯಕವಾಗಿ ಶ್ರದ್ದಾ ಭಕ್ತಿಬಾವದಿಂದ ಮನೆ ಹಾಗೂ ಮನೆಯ ಅಂಗಳವನ್ನೆಲ್ಲ ಸಿಂಗರಿಸಿ ಹಬ್ಬ ಆಚರಿಸುತ್ತಾರೆ ಅಷ್ಟೆ ಅಲ್ಲದೆ ಅಕ್ಕ ಪಕ್ಕದ ಗ್ರಾಮಗಳಿಂದಲು ಸಹ ಭಕ್ತಾಧಿಗಳು ಹಬ್ಬಕ್ಕೆ ಬಂದು ತಾಯಿಗೆ ಪೂಜೆ ಸಲ್ಲಿಸಿ ನಂತರ ನೆಂಟರ ಮನೆಗೆ ಓತಣಕೂಟ್ಟಕ್ಕೆ ಬರುವುದು ವಾಡಿಕೆ

ಈ ಸಂಭ್ರಮದಲ್ಲಿರಬೇಕಾದ ಗ್ರಾಮಸ್ಥರು ಇಂದು ಮನೆಯ ಮುಂಭಾಗವಿರುವ ಕಸದ ರಾಶಿಯಿಂದ ಬೆಸತ್ತು ಅದರ ದುರ್ವಾಸನೆ ತಾಳಲಾರದೆ ಬಂದ ನೆಂಟರಿಷ್ಟರಿಗೂ ಗ್ರಾಮದ ಅನೈರ್ಮಲ್ಯದ ದರುಶನ ಮಾಡಿಸಿದಂತಾಗಿದ್ದು. ಈ ಹಿಂದೆಯೇ ಅನೇಕ ಬಾರಿ ಗ್ರಾಮಪಂಚಾಯಿತಿಗೆ ಈ ವಿಚಾರವಾಗಿ ಕಸತೆಗೆಸುವಂತೆ ದೂರಿದ್ದರು ಸಹ ಗ್ರಾಪಂ ಅಧ್ಯಕ್ಷ ಹಾಗೂ ಪಿ.ಡಿ.ಒ ಈ ಬಗ್ಗೆ ಯಾವುದೆ ಕ್ರಮಕೈಗೂಳ್ಳದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಎಡೆಮಾಡಿಕೂಟ್ಟಿದೆ. ಹಬ್ಬಮುಗಿಸಿದ ಗ್ರಾಮಸ್ಥರು ಕಸದ ರಾಶಿಯನ್ನು ಎತ್ತಿನ ಗಾಡಿಯಲ್ಲಿ ತುಂಬಿ ಗ್ರಾಪಂ ಆವರಣದಲ್ಲಿ ಸುರಿದು ಪ್ರತಿಭಟನೆ ನಡೆಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!