Mysore
21
overcast clouds

Social Media

ಭಾನುವಾರ, 14 ಜೂನ್ 2026
Light
Dark

ನೃಪತುಂಗ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಪ್ರೊ.ಎ.ಎಂ.ಸುಧಾಕರ ಗೆ ಅಧಿಕಾರ

ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಕಂಪ್ಯೂಟರ್ ಕೇಂದ್ರ ಮತ್ತು ಸಿಸ್ಟ್ ನ ನಿವೃತ್ತ ನಿರ್ದೇಶಕರಾದ ಪ್ರೊ.ಎ.ಎಂ.ಸುಧಾಕರ ಅವರು ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯು ಈ ವರ್ಷದಿಂದ ಆರಂಭಿಸಿರುವ ನೃಪತುಂಗ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ  ವಹಿಸಿಕೊಂಡರು. ಅವರು ನೃಪತುಂಗ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿಯೂ ಕಾರ್ಯನಿರ್ವಹಿಸುತ್ತಾರೆ.

ಸಂಸ್ಥೆಯ ಆವರಣದಲ್ಲಿ ನಡೆದ ಪದಾರೋಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಪ. ಮಲ್ಲೇಶ, ಉಪಾಧ್ಯಕ್ಷರಾದ ಸ.ರ. ಸುದರ್ಶನ, ಕಾರ್ಯದರ್ಶಿಯವರಾದ ಹೆಚ್.ಜಿ ಕೃಷ್ಣಪ್ಪ ಮತ್ತು ಪಿ. ಎಂ ಸವಿತಾ ಮಲ್ಲೇಶ್, ಖಜಾಂಚಿಯವರಾದ ಎಚ್ ಟಿ ಶೈಲಜಾ, ಸಹಕಾರ್ಯದರ್ಶಿಯವರಾದ ಶೀಲಾ ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಶಿಕ್ಷಣದಲ್ಲಿ ಕನ್ನಡ ಮಾಧ್ಯಮಕ್ಕೆ ಬದ್ಧವಾಗಿರುವ ಸಂಸ್ಥೆಯು ಅದಕ್ಕೆ ಗಟ್ಟಿಯಾದ ಆರ್ಥಿಕ ನೆಲೆಯನ್ನು ಒದಗಿಸಲು ಈ ವರ್ಷದಿಂದ ಬಿಸಿಎ ಮತ್ತು ಬಿಕಾಂ ಪದವಿ ತರಗತಿಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾರಂಭಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!