Mysore
23
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ನ.15 ರಂದು ‘ಸಿದ್ದರಾಮಯ್ಯ-75’ ಕೃತಿ ಬಿಡುಗಡೆ

ಮೈಸೂರು: ಡಾ.ಹರೀಶ್‌ಕುಮಾರ್ ಅವರು ರಚಿಸಿರುವ ‘ಸಿದ್ದರಾಮಯ್ಯ-೭೫’ ಕೃತಿ ಬಿಡುಗಡೆ ಸಮಾರಂಭ ನ.೧೫ರಂದು ರಾಮಕೃಷ್ಣ ನಗರದಲ್ಲಿರುವ ನೃಪತುಂಗ ಶಾಲೆಯ ರಮಾಗೋವಿಂದ ರಂಗಮಂದಿರದಲ್ಲಿ ನಡೆಯಲಿದೆ.
ಅಂದು ಸಂಜೆ ೪.೩೦ಕ್ಕೆ ನಡೆಯುವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿರುತ್ತಾರೆ. ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ.

ಹಿರಿಯ ಸಮಾಜವಾದಿ ಪ.ಮಲ್ಲೇಶ್ ಅವರು ದಿಕ್ಸೂಚಿ ನುಡಿಯನ್ನಾಡಲಿದ್ದಾರೆ. ಕೃತಿ ಕುರಿತು ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಮಾತನಾಡಲಿದ್ದಾರೆ. ಕೃತಿಯ ಲೇಖಕ ಡಾ.ಹರೀಶ್‌ಕುಮಾರ್ ಹಾಜರಿರಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!