Mysore
21
overcast clouds

Social Media

ಶನಿವಾರ, 04 ಜುಲೈ 2026
Light
Dark

ನಂಜನಗೂಡು ಶ್ರೀಕಂಠೇಶ್ವರನ ಹುಂಡಿಯಲ್ಲಿ 1.52 ಕೋಟಿ ಸಂಗ್ರಹ

ನಂಜನಗೂಡು : ನಗರದ ಪ್ರಸಿದ್ಧ ಶ್ರೀಕಂಠೇಶ್ವರನ ದೇವಾಲಯದ ಹುಂಡಿ ಎಣಿಕೆ ಕಾರ್ಯವು ನಡೆದಿದ್ದು, ಈ ಬಾರಿ ೧ ಕೊಟಿ ೫೨ ಲಕ್ಷ ೭೫ ಸಾವಿರದ ೧೩೬ ರೂ ಸಂಗ್ರಹವಾಗಿದೆ.
ದೇವಾಲಯದ ದಾಸೋಹ ಭವನದಲ್ಲಿ  ಬಿಗಿ ಭದ್ರತೆಯ ನಡುವೆ ಹುಂಡಿ ಎಣಿಕೆಯು ಬ್ಯಾಂಕ್ ಆಫ್ ಬರೋಡಾ ಶಾಖೆಯ ಸಿಬ್ಬಂದಿಗಳಿಂದ ನಡೆದಿದ್ದು, ಹಣದ ಜೊತೆಗೆ 167 ಗ್ರಾಂ ಚಿನ್ನ, 9 ಕೆ ಜಿ ಬೆಳ್ಳಿ ಸೇರಿದಂತೆ 64 ವಿದೇಶಿ ಕರೆನ್ಸಿ ಸಂಗ್ರಹವಾಗಿದೆ.

ಹುಂಡಿ ಎಣಿಕೆಯ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಕಮಲಾ ಬಾಯಿ ಅಲ್ಲಿನ ತಹಶೀಲ್ದಾರ ರಾಜು, ದೇವಾಲಯ ಉಪ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ಪ್ರಸಾದ ಗುರುಮಲ್ಲಯ್ಯ ಸ್ಥಳೀಯ ಬರೋಡಾ ಬ್ಯಾಂಕ್ ವ್ಯವಸ್ಥಾಪಕ ಟಿ ಕೆ ನಾಯಕ ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!