Mysore
30
scattered clouds

Social Media

ಶುಕ್ರವಾರ, 27 ಫೆಬ್ರವರಿ 2026
Light
Dark

ನಾಡು,ನುಡಿ ಉಳಿಸುವಲ್ಲಿ ಆಟೋ ಚಾಲಕರ ಪಾತ್ರ ಮಹತ್ವದ್ದು: ರುದ್ರೇಶ್

ಚಾಮರಾಜನಗರ: ಕನ್ನಡ ನಾಡು,ನುಡಿ ಬೆಳವಣಿಗೆಯಲ್ಲಿ ಆಟೋ ಚಾಲಕರ ಪಾತ್ರ ಅಪಾರವಾದದ್ದು ಎಂದು  ಕೆ ಐ ಆರ್ ಡಿ ಎಲ್ ಅಧ್ಯಕ್ಷ ಎಂ.ರುದ್ರೇಶ್ ಹೇಳಿದರು.

ನಗರದ ಭುವನೇಶ್ವರಿ ವೃತ್ತದಲ್ಲಿ ಜೈ ಭುವನೇಶ್ವರಿ ಆಟೋ ಚಾಲಕರ ಸಂಘ ವತಿಯಿಂದ ನಡೆದ  ಕನ್ನಡ ರಾಜ್ಯೋತ್ಸವ ಹಾಗೂ ಆಟೋ ಚಾಲಕರಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರ ಪುಷ್ಷಾರ್ಚನೆ ಮಾಡಿ ಮಾತನಾಡಿದರು.

ನಾನು ಸಹ ಆಟೋಚಾಲಕ ವೃತ್ತಯಿಂದ ರಾಜಕಾರಣಕ್ಕೆ  ಬಂದಿದ್ದೇನೆ  ನಿಮ್ಮಲ್ಲರ ಸಂಕಷ್ಟಗಳು ನನಗೂ ಅರಿವಿದೆ. ನಿಜವಾದ ಕನ್ನಡ ಪ್ರೇಮಿಗಳು ಆಟೋ ಚಾಲಕರಾಗಿದ್ದು,  ತಮ್ಮ  ಆಟೋಗಳಲ್ಲಿ  ಕನ್ನಡ ಬರಹ, ಕನ್ನಡ ಭಾವುಟ, ಕನ್ನಡ ಗೀತೆಗಳನ್ನು ಹಾಕುವ ಮೂಲಕ  ಕನ್ನಡ ಪ್ರೇಮ ಮೂಡಿಸುವ ಕೆಲಸವನ್ನು ನಿಸ್ವಾರ್ಥತೆಯಿಂದ ಮಾಡುತ್ತಿದ್ದಾರೆ.   ಕನ್ನಡ ರಾಜ್ಯೋತ್ಸವದ ಶುಭಾಶಯ  ಹೇಳಿದರು.

ಆಟೋಚಾಲಕರಿಗೆ ರುದ್ರೇಶ್ ಸಮವಸ್ತ್ರ ವಿತರಣೆ ಮಾಡಿದರು ಆಟೋ ಚಾಲಕರು ಭಾರೀಗಾತ್ರದ ಹೂವಿನ ಹಾರ ಕ್ರೇನ್ ಮೂಲಕ ರುದ್ರೇಶ್ ಅವರಿಗೆ ಹಾಕಿ ಅಭಿಮಾನ ಮೆರೆದರು.

ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆದ ಆಟೋಗಳ ಮೆರವಣಿಗೆಗೆ  ಸ್ವತಹ ರುದ್ರೇಶ್ ಆಟೋ ಓಡಿಸುವ ಮೂಲಕ ಚಾಲನೆ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!