Mysore
16
scattered clouds

Social Media

ಶುಕ್ರವಾರ, 06 ಫೆಬ್ರವರಿ 2026
Light
Dark

ವನ್ಯಜೀವಿ ಬೇಟೆಗೆ ಯತ್ನಿಸುತ್ತಿದ್ದ ಓರ್ವನ ಬಂಧನ: ಮೂವರು ಪರಾರಿ

ಮೈಸೂರು: ಅಕ್ರಮವಾಗಿ ಕಾಡಿಗೆ ಪ್ರವೇಶಿಸಿ ವನ್ಯಜೀವಿಗಳ ಭೇಟೆಗೆ ಯತ್ನಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಅರಣ್ಯ ವ್ಯಾಪ್ತಿಯ ಹುಣಸೂರು ಬಳಿ ಈ ಘಟನೆ ನಡೆದಿದ್ದು, ಸಂಪತ್‌ ಕುಮಾರ್‌ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.

ರವೀಂದ್ರ, ಪವನ್‌ ಹಾಗೂ ಮಹೇಶ್‌ ಎಂಬುವವರು ತಲೆ ಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬೀಸಿದ್ದಾರೆ.

ಬಂಧಿತ ಆರೋಪಿಯಿಂದ ಬೇಟೆಗೆ ಬಳಸಲಾಗಿದ್ದ ಬಂದೂಕು, ಜೀವಂತ ಕಾಡತೂಸುಗಳು, ಮೊಬೈಲ್‌ ಟಾರ್ಚರ್‌ನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 

 

 

 

Tags:
error: Content is protected !!