ಮೈಸೂರು: ವಿಶ್ವವಿಖ್ಯಾತ ಶ್ರೀರಂಗಪಟ್ಟಣ ರಂಗನತಿಟ್ಟು ವಿಹಾರ ದೋಣಿಗಳಿಗೆ ಕಲ್ಯಾಣ ಕರ್ನಾಟಕದ ಮೂರು ನದಿಗಳ ಹೆಸರನ್ನು ಇಡಲಾಗಿದೆ. ಈ ಮೂಲಕ ಹಕ್ಕಿಗಳ ಕಲವರದ ಜೊತೆಗೆ ಕಲ್ಯಾಣ ಕರ್ನಾಟಕದ ನದಿಗಳ ಹೆಸರು ಕೂಡು ಅನುರಣಿಸುತ್ತಿದೆ.
ರಂಗನತಿಟ್ಟಿಗೆ ಹೊಸದಾಗಿ ಸೆರ್ಪಡೆಯಾಗಿರುವ 3 ವಿಹಾರ ದೋಣಿಗಳಿಗೆ ಮಾಂಜ್ರಾ, ಕಾರಂಜಾ ಮತ್ತು ಗೋದಾವರಿ ನದಿಗಳ ಹೆಸರಿಡಲಾಗಿದೆ. ಅರಣ್ಯ ಜೀವವಿಜ್ಞಾನ ಸಚಿವ ಈಶ್ವರ ಬಿ.ಖಂಡ್ರೆ ಅವರು ಬುಧವಾರ ದೋಣಿಗಳ ಹೆಸರನ್ನು ಅನಾವರಣಗೊಳಿಸಿದ್ದಾರೆ.