ಮೈಸೂರು : ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪ್ರವಾಸಿಗರು, ಸ್ಥಳೀಯರನ್ನು ಮೈ ರೋಮಾಂಚನಗೊಳಿಸುವ ವೈಮಾನಿಕ ಪ್ರದರ್ಶನದಲ್ಲಿ ಯುದ್ಧ ವಿಮಾನಗಳ ಪ್ರದರ್ಶನ ನಡೆಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಬೇಡಿಕೆ ಇಡಲಿದೆ.
ವರ್ಷದಿಂದ ವರ್ಷಕ್ಕೆ ವೈಮಾನಿಕ ಪ್ರದರ್ಶನದಲ್ಲಿ ವಿಮಾನಗಳ ಹಾರಾಟ ಹೆಚ್ಚಿಸುವ ಬದಲಿಗೆ ಕಡಿತ ಮಾಡಿದ್ದರಿಂದ ಅಷ್ಟೇನೂ ಮನರಂಜನೆ ದೊರೆತಿರಲಿಲ್ಲ. ಹಾಗಾಗಿ, ಈ ಬಾರಿ ಯುದ್ಧ ವಿಮಾನಗಳ ಹಾರಾಟವನ್ನು ನಡೆಸುವಂತೆ ಕೋರಿ ಪತ್ರವ್ಯವಹಾರ ಮಾಡಲಾಗಿದೆ.
೨೦೨೦,೨೦೨೧ರಲ್ಲಿ ಕೊರೊನಾ ಕಾರಣಕ್ಕಾಗಿ ವೈಮಾನಿಕ ಪ್ರದರ್ಶನ ರದ್ದುಪಡಿಸಲಾಗಿತ್ತು. ೨೦೨೩ರಲ್ಲಿ ವೈಮಾನಿಕ ಪ್ರದರ್ಶನಕ್ಕೆ ಅನುಮತಿ ದೊರೆತಿರಲಿಲ್ಲ. ೨೦೨೪ ಮತ್ತು ೨೦೨೫ರಲ್ಲಿ ವೈಮಾನಿಕ ಪ್ರದರ್ಶನ ನಡೆದಿದೆ. ಆದ್ದರಿಂದ, ಈ ಬಾರಿ ಮತ್ತಷ್ಟು ವಿಮಾನಗಳ ಪ್ರದರ್ಶನ ನಡೆಸುವಂತೆ ಕೋರಲಾಗುತ್ತಿದೆ ಎಂದು ಹೇಳಲಾಗಿದೆ.





