ಮೈಸೂರು : ೫೦ ;೫೦ ಅನುಪಾತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ಮುಡಾ ನಿವೇಶನ ಮಂಜೂರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಪತ್ನಿಗೆ ೨ ಸಾವಿರ ಬೆಲೆಯ ಭೂಮಿ ಬದಲಾಗಿ ೧೦ ಸಾವಿರಕ್ಕೂ ಹೆಚ್ಚು ಬೆಲೆಯ ಭೂಮಿಯನ್ನು ಮುಡಾದಿಂದ ಕೊಡಲಾಗಿದ್ದು, ಸಾಕಷ್ಟು ಅನುಮಾನ ಹುಟ್ಟುಹಾಕುತ್ತಿದೆ.
ನಗರದ ರಿಂಗ್ ರಸ್ತೆಯ ಹೊರವಲಯದ ದೇವನೂರು ಬಡಾವಣೆಯಲ್ಲಿ ವಶಪಡಿಸಿಕೊಂಡಿದ್ದ ಭೂಮಿ ಪ್ರಸ್ತುತ ಚರದ ಅಡಿಗೆ ೨ ರಿಂದ ೩ ಸಾವಿರ ಹಣ ನಿಗದಿ ಮಾಡಲಾಗಿದೆ. ಅದಕ್ಕೆ ಬದಲಾಗಿ ಸಿಎಂ ಪತ್ನಿ ಪಾರ್ವತಿಗೆ ವಿಜಯನಗರದ ಎರಡನೇ ಹಂತದಲ್ಲಿ ೧೪ ಸೈಟ್ ಮಂಜೂರು ಮಾಡಲಾಗಿದೆ. ಅಲ್ಲಿ ಚದರ ಅಡಿಗೆ ಕನಿಷ್ಟ ೧೦ ಸಾವಿರ ಬೆಲೆ ಇದೆ.
ಪ್ರಸ್ತುತ ವಿಜಯನಗರದ ೩ನೇ ಹಂತದ ಇ ಬ್ಲಾಕ್ ನಲ್ಲಿ ೪ , ಡಿ ಬ್ಲಾಕ್ ನಲ್ಲಿ ೨ ,ಜಿ ಬ್ಲಾಕ್ ಮತ್ತು ಸಿ ಬ್ಲಾಕ್ ನಲ್ಲಿ ತಲಾ ಒಂದು ಸೈಟ್ ಮಂಜೂರು ಮಾಡಿದ್ರೆ, ೪ನೇ ಹಂತದ ೨ನೇ ಫೇಸ್ ನಲ್ಲಿ ೬ ಸೈಟ್ ನೀಡಲಾಗಿದೆ. ಹೀಗಾಗಿ ಮುಡಾ ನೀಡಿರುವ ಬದಲಿ ನಿವೇಶನದ ಸುತ್ತ ಅನುಮಾನಗಳ ಹುತ್ತ ಬೆಳೆಯುತ್ತಿದೆ.
.