Mysore
20
clear sky

Social Media

ಮಂಗಳವಾರ, 03 ಮಾರ್ಚ್ 2026
Light
Dark

ಕೋಟೆ | ಹುಲಿ ದಾಳಿಗೆ ರೈತ ಬಲಿ

ಎಚ್.ಡಿ.ಕೋಟೆ : ಜಮೀನಿನಲ್ಲಿ ದನ ಮೇಯಿಸುತ್ತಿದ್ದಾಗ ಆದಿವಾಸಿ ರೈತನ ಮೇಲೆ ಹುಲಿ ದಾಳಿ ನಡೆಸಿದ ಪರಿಣಾಮ ಸಾವಿಗೀಡಾಗಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.

ಬಂಡೀಪುರ ಅಭಯಾರಣ್ಯದ ಎನ್.ಬೇಗೂರು ಅರಣ್ಯ ವಲಯ ವ್ಯಾಪ್ತಿಯ ಮಾಳದ ಹಾಡಿಯ ಕೆಂಚ (೬೭) ಹುಲಿ ದಾಳಿಯಿಂದ ಸಾವಿಗೀಡಾಗಿರುವ ವ್ಯಕ್ತಿ.

ಕಾಡಿನ ಸಮೀಪದಲ್ಲಿರುವ ಮಾಳದ ಹಾಡಿಯ ಜಮೀನಿನಲ್ಲಿ ಶನಿವಾರ ಕೆಂಚ ಕೆಲಸ ಮಾಡಿಕೊಂಡು ದನ ಮೇಯಿಸುತ್ತಿದ್ದಾಗ ಸಂಜೆ ವೇಳೆ ಹುಲಿ ದಾಳಿ ನಡೆಸಿ ಕಾಡಿಗೆ ಎಳೆದುಕೊಂಡು ಹೋಗಿ ತಿಂದಿದೆ.
ಶನಿವಾರ ರಾತ್ರಿ ತನ್ನ ಪತಿ ಮನೆಗೆ ಬಾರದೇ ಇದ್ದಾಗ ಪತ್ನಿ ಮಾರೆ ಎಲ್ಲಾ ಕಡೆ ಹುಡುಕಿದ್ದಾರೆ. ಆದರೆ ಸುಳಿವೇ ಸಿಗಲಿಲ್ಲ. ನಂತರ ಅರಣ್ಯ ಅಧಿಕಾರಿಗಳಿಗೆ ವಿಚಾರ ತಿಳಿಸಿದ್ದು, ಕಾಡಿನೊಳಗೆ ಪರಿಶೀಲಿಸಿದಾಗ ಹುಲಿ ದಾಳಿಯಿಂದ ಸಾವನ್ನಪ್ಪಿರುವ ಕೆಂಚನ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಎಸಿಎಫ್ ಸತೀಶ್, ಅರಣ್ಯ ಅಧಿಕಾರಿ ಅಮೃತೇಶ್, ಗಿರಿಜನ ಮುಖಂಡರುಗಳಾದ ಶೈಲೇಂದ್ರ, ಪುಟ್ಟಬಸವ, ಸಿದ್ದರಾಜು, ದಾಸಪ್ಪ, ಇತರರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.

ಹುಲಿ ದಾಳಿಯಿಂದ ಕೆಂಚ ಮೃತಪಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದನ್ನೆಲ್ಲ ಪರಿಶೀಲಿಸಿ ಅವರ ಕುಟುಂಬಕ್ಕೆ ೧೫ ಲಕ್ಷ ರೂ. ಪರಿಹಾರದ ಹಣವನ್ನು ಶಾಸಕರಾದ ಅನಿಲ್ ಚಿಕ್ಕಮಾದು ಅವರ ಸಮ್ಮುಖದಲ್ಲಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:
error: Content is protected !!