Mysore
29
broken clouds

Social Media

ಸೋಮವಾರ, 07 ಸೆಪ್ಟೆಂಬರ್ 2026
Light
Dark

ಪ್ರತಾಪ್ ಸಿಂಹ ಎದುರೇ ಪೇಪರ್ ತಿಮ್ಮ ಎಂದು ಕೂಗಿದ ಪ್ರತಿಭಟನಾಕಾರರು

ಮೈಸೂರು : ಕೇಂದ್ರ ಸರ್ಕಾರ ರಾಜ್ಯಕ್ಕೆ 5 ಕಿಲೋ ಅಕ್ಕಿ ಕೊಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ನಗರದ ಜಲದರ್ಶಿನಿಯಲ್ಲಿ ಸಂಸದ ಪ್ರತಾಪ್ ಸಿಂಹ ಕಾರಿಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಅಲ್ಲದೆ, ಪ್ರತಾಪ್ ಸಿಂಹ ಎದುರೇ ‘ಪೇಪರ್ ತಿಮ್ಮ’ ಎಂದು ಪ್ರತಿಭಟನಾಕರಾರು ಅಣುಕಿಸಿದರು.

ಕಚೇರಿಯ ಗೇಟ್ ಬಳಿ ಪ್ರತಾಪ್ ಸಿಂಹ ಕಾರು ಬರುತ್ತಿದ್ದಂತೆ ಓಡೋಡಿ ಬಂದ ಕಾಂಗ್ರೆಸ್ ಕಾರ್ಯಕರ್ತರು ಕಾರಿಗೆ ಮುತ್ತಿಗೆ ಹಾಕಿದರು. ಈ ವೇಳೆ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದರು. ಕಾರ್ಯಕರ್ತರನ್ನು ಕಂಡು ಕಾರಿನ ಗ್ಲಾಸ್ ಏರಿಸಿ ಸಂಸದ ಪ್ರತಾಪ್ ಸಿಂಹ ಸ್ಥಳದಿಂದ ಹೊರಟ ಹೋದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!