Mysore
23
overcast clouds
Light
Dark

ಕುಡಿಯುವ ನೀರಿನ ಸಮ್ಯಸ್ಯೆಗೆ ಕಂಟ್ರೋಲ್‌ ರೂಂ ಸ್ಥಾಪನೆ

ಮೈಸೂರು: ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಅಥವಾ ಪ್ರವಾಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಸರಬರಾಜಾಗುತ್ತಿದ್ದಲ್ಲಿ ಹಾಗೂ ಕಲುಷಿತ ನೀರು ಸೇವನೆಯಿಂದ ವಾಂತಿ ಭೇದಿ ಪ್ರಕರಣಗಳು ಕಂಡು ಬಂದಲ್ಲಿ ದೂರುಗಳನ್ನು ದಾಖಲಿಸಲು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕಛೇರಿಗಳಲ್ಲಿ 24×7 ಕಂಟ್ರೋಲ್ ರೂಂ ನ್ನು ತೆರೆಯಲಾಗಿದೆ.

ಜಿಲ್ಲಾಧಿಕಾರಿಗಳ ಕಚೇರಿಯ ದೂ.ಸಂ:0821-2423800,1077,  ಮೈಸೂರು ತಾಲ್ಲೂಕು ಕಛೇರಿ ದೂ.ಸಂ:0821-2414812, ನಂಜನಗೂಡು ದೂ.ಸಂ:08221-223108, ತಿ.ನರಸೀಪುರ ದೂ.ಸಂ:08227-260210, ಹುಣಸೂರು ದೂ.ಸಂ:08222-252959, ಕೆ.ಆರ್.ನಗರ ದೂ.ಸಂ:08223-262371, ಸಾಲಿಗ್ರಾಮ ದೂ.ಸಂ:08223-283833, ಪಿರಿಯಾಪಟ್ಟಣ ದೂ.ಸಂ:08223-274175, ಹೆಚ್.ಡಿ.ಕೋಟೆ ದೂ.ಸಂ:08228-255325, ಸರಗೂರು ದೂ.ಸಂ:08228-296100 ನ್ನು ಸಂಪರ್ಕಿಸಿ ದೂರು ದಾಖಲಿಸಬಹುದು ಎಂದು ಜಿಲ್ಲಾ ಪಂಚಾಯತ್ ನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.