ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಬರುವ ಎಲ್ಲಾ ಆನೆಗಳು ಆರೋಗ್ಯವಾಗಿವೆ ಎಂದು ಡಿಸಿಎಫ್ ಡಾ.ಪ್ರಭುಗೌಡ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಆಗಸ್ಟ್ 4ರಂದು ಗಜಪಯಣ ಹಿನ್ನೆಲೆಯಲ್ಲಿ ಗಜಪಯಣ ಸ್ವಾಗತಕ್ಕೆ ಸಿದ್ಧತೆ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ಚಾಲನೆ ನೀಡಲಿದ್ದಾರೆ. ಸಚಿವ ಈಶ್ವರ್ ಖಂಡ್ರೆ ಸೇರಿದಂತೆ ಜನಪ್ರತಿನಿದಿನಗಳು ಭಾಗಿಯಾಗಲಿದ್ದಾರೆ.
14 ಆನೆಗಳು ದಸರಾದಲ್ಲಿ ಭಾಗಿಯಾಗುತ್ತಿವೆ. ಮೊದಲ ಹಂತದಲ್ಲಿ 9ನಆನೆಗಳು ಆಗಮಿಸಲಿವೆ. 7 ಗಂಡಾನೆಗಳು, 2 ಹೆಣ್ಣಾನೆಗಳು ಮೊದಲ ಹಂತದಲ್ಲಿ ಆಗಮಿಸುತ್ತಿವೆ. ಸೋಮವಾರ 12.30ಕ್ಕೆ ಪೂಜೆ ನಿಗದಿ ಮಾಡಲಾಗಿದೆ. ಎಲ್ಲಾ ಆನೆಗಳು ಆರೋಗ್ಯವಾಗಿದೆ ಎಂದರು.
ಇನ್ನು ಅಭಿಮನ್ಯು ಬಳಿಕ ಅಂಬಾರಿ ಹೊರುವ ಆನೆ ಯಾವುದು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಧನಂಜಯ, ಮಹೇಂದ್ರ, ಪ್ರಶಾಂತ ಆನೆಗಳಿಗೂ ತರಬೇತಿ ನೀಡುತ್ತಿದ್ದೇವೆ. ಅಂಬಾರಿ ಹೊರುವ ಆನೆಗೆ ಹೇಗೆ ತಾಲೀಮು ಮಾಡ್ತೀವಿ ಅದೇ ರೀತಿ ತಾಲೀಮು ಮಾಡ್ತಿದ್ದೇವೆ ಎಂದರು.
ಇನ್ನೂ ಆನೆಗಳು ನಾಡಿಗೆ ಬಂದಾಗ ವಿಶೇಷ ಆಹಾರ ನೀಡ್ತೇವೆ. ಅರಣ್ಯ ವೈದ್ಯಾಧಿಕಾರಿಗಳು ತಿಳಿಸುವ ಹಾಗೆ ಆಹಾರ ನೀಡ್ತೇವೆ. 4 ರಂದು ಮೈಸೂರಿಗೆ ಆನೆಗಳು ಆಗಮಿಸಲಿವೆ. ಮೂರು ದಿನ ಅರಣ್ಯ ಭವನದಲ್ಲಿ ಉಳಿಯಲಿವೆ.
7ರಂದು ಮಧ್ಯಾಹ್ನ ಅರಮನೆ ಆವರಣ ಪ್ರವೇಶ ಮಾಡಲಿವೆ. ಸ್ಪೆಷಲ್ ಫುಡ್ ನೀಡುವ ಮುನ್ನವೇ ಆನೆಗಳ ತೂಕ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.





