Mysore
26
overcast clouds

Social Media

ಶನಿವಾರ, 29 ಆಗಸ್ಟ್ 2026
Light
Dark

ಶ್ರೀಗಳಂತಹ ಮಹನೀಯರನ್ನು ನೆನೆಯುವುದೇ ಒಂದು ಪುಣ್ಯದ ಕೆಲಸ : ಸೋಮಶೇಖರ್‌

ಮೈಸೂರು: ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಯವರ ೧೧೭ನೇ ಜನ್ಮ ದಿನಾಚರಣೆಯನ್ನು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರ ‘ಜನನಿ‘ ಕಚೇರಿಯಲ್ಲಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಎಂ.ಕೆ.ಸೋಮಶೇಖರ್ ಅವರು, ಸಿದ್ದಗಂಗಾ ಶ್ರೀಗಳಂತಹ ಮಹನೀಯರನ್ನು ನೆನೆಯುವುದೇ ಒಂದು ಪುಣ್ಯದ ಕೆಲಸ.

ಶ್ರೀಗಳು ತಮ್ಮ ಜೀವನದುದ್ದಕ್ಕೂ ಸಾಮಾಜಿಕ ಸೇವೆಯ ಮೂಲಕವೇ ಮನೆ ಮಾತಾಗಿದ್ದರು. ಶಿಕ್ಷಣ, ಕಾಯಕ, ದಾಸೋಹದ ತತ್ವವನ್ನು ಅನುಸರಿಸುತ್ತಾ ತಮ್ಮ ಉದಾತ್ತ ಚಿಂತನೆಗಳನ್ನು, ಸಾಂಸ್ಕೃತಿಕ ಮತ್ತು ಧಾರ್ಮಿಕ ಕೃಷಿಯನ್ನು ಈ ನಾಡಿಗೆ ಅರ್ಪಿಸಿದ್ದಾರೆ ಎಂದು ಬಣ್ಣಿಸಿದರು.

ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ರವಿಶಂಕರ್, ವಿಜಯಕುಮಾರ್, ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಘಟಕದ ವಿನಯಕುಮಾರ್, ಶಿವಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ರಾಕೇಶ್, ಮುಖಂಡರಾದ ಗೃಹಶೋಭೆ ಕೃಷ್ಣ, ಕೇಬಲ್ ಶೇಖರ್, ಸುಂದರ್, ಸುನಿಲ್, ಮಹೇಶ್, ಮನಸು, ನಾಗ, ಮಹಾದೇವ, ನದೀಂ ಮತ್ತಿತರರು ಹಾಜರಿದ್ದರು.

Tags:
error: Content is protected !!