Mysore
30
overcast clouds

Social Media

ಶನಿವಾರ, 20 ಜೂನ್ 2026
Light
Dark

ಡಿ.ಕೆ.ಶಿವಕುಮಾರ್‌ ನಿಯತ್ತಿನ ಸೈನಿಕ: ಶಾಸಕ ರವಿಕುಮಾರ್‌ ಗಣಿಗ ಬ್ಯಾಟಿಂಗ್‌

ಮಂಡ್ಯ: ಸಚಿವ ಎಚ್‌.ಸಿ.ಮಹದೇವಪ್ಪ ಅವರ ಬೀದಿನಾಯಿ ಹೇಳಿಕೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಶಾಸಕ ರವಿಕುಮಾರ್‌ ಗಣಿಗ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಂಡ್ಯದಲ್ಲಿ ಮಾತನಾಡಿದ ಅವರು, ಡಿಕೆಶಿ ಅಂದರೆ ನಿಯತ್ತಿನ ಸೈನಿಕ. ಹೈಕಮಾಂಡ್‌ಗೆ ನಿಯತ್ತಿನಲ್ಲಿರುವ ಮನುಷ್ಯ. ಡಿ.ಕೆ.ಶಿವಕುಮಾರ್‌ ಅಂದರೆ ಕಾಂಗ್ರೆಸ್‌ ಪಕ್ಷದ ನಿಯತ್ತು ಅದಕ್ಕೆ ಎಚ್.ಸಿ.ಮಹದೇವಪ್ಪ ಹೇಳುತ್ತಿರುವುದು ಎಂದು ಟಾಂಗ ಕೊಟ್ಟರು.

ಒಂದು ವಾರದಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ. ನಾಯಿ ವ್ಯಂಗ್ಯ ಎಲ್ಲದಕ್ಕೂ ಉತ್ತರ ಕೊಡುತ್ತೇವೆ. ಸಿಎಂ ಸೇರಿ 136 ಶಾಸಕರುಗಳು ಡಿಕೆಶಿ ಆಪ್ತರೇ ಎಂದು ಹೇಳಿದರು.

 

 

Tags:
error: Content is protected !!