Mysore
24
overcast clouds

Social Media

ಗುರುವಾರ, 14 ಮೇ 2026
Light
Dark

ಮಲೆ ಮಹದೇಶ್ವರ ಬೆಟ್ಟ : ಮುಡಿ ತೆಗೆಯಲು ಹೆಚ್ಚಿನ ಹಣ ವಸೂಲಿ – ಭಕ್ತರ ಆರೋಪ

ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಡಿ ತೆಗೆಯಲು ಟಿಕೆಟ್ ಅಲ್ಲದೆ ಮುಡಿ ಮಾಡುವವರು ಹೆಚ್ಚಿನ ಹಣ ಪಡೆಯುತ್ತಿದ್ದಾರೆ ಎಂದು ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಹೊತ್ತಿರುವ ಭಕ್ತರು ಮುಡಿ ಮಾಡಿಸಲು 50ರೂ ಟಿಕೆಟ್ ಮಾತ್ರ ಪಡೆಯಬೇಕೆಂದು ನಾಮಫಲಕದಲ್ಲಿದೆ. ಟಿಕೆಟ್ ಪಡೆದುಕೊಂಡು ಮುಡಿ ಮಾಡಿಸಲು ಹೋಗುವ ಭಕ್ತರನ್ನು ಮುಡಿ ಮಾಡುವವರು ಮೊದಲೇ ಇಂತಿಷ್ಟು ಹಣ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದವರಿಗೆ ಧಮಕಿಯನ್ನು ಹಾಕಿ ಎದುರಿಸುತ್ತಿದ್ದಾರೆ, ಹಣ ನೀಡದಿದ್ದರೆ ಮುಡಿಯನ್ನು ಸರಿಯಾಗಿ ಮಾಡದೆ ಯದ್ವ ತದ್ವ ರಕ್ತ ಬರುವ ರೀತಿ ಮುಡಿ ಮಾಡುತ್ತಾರೆ ಎಂದು ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅನಿಲ್ ಕುಮಾರ್ ಎಂಬುವರು ಫೇಸ್ಬುಕ್ ಸಾಮಾಜಿಕ ಜಾಲತಾಣದಲ್ಲಿ ಕೋಟಿ ಕೋಟಿ ಆದಾಯ ಬಂದ್ರು ನಮ್ಮ ಕೂದಲು ಕೊಡಕ್ಕೆ ದುಡ್ಡು ಕೊಡಬೇಕು ಇನ್ನು ಇವರೆಲ್ಲ ಹೇಗೆ ಅಭಿವೃದ್ಧಿ ಮಾಡುತ್ತಾರೆ. ಶ್ರೀ ಕ್ಷೇತ್ರದಲ್ಲಿ ನಿಮ್ಮಿಂದ ಭಕ್ತರಿಗೆ ಯಾವುದಾದರೂ ಒಂದು ಉಚಿತ ಸೇವೆ ಅಂತ ಏನಾದರೂ ಇದ್ದರೆ ಹೇಳಿ ನಾಚಿಕೆ ಆಗಬೇಕು ನಿಮಗೆ ದೇವರ ಹೆಸರಲ್ಲಿ ದುಡ್ಡು ಮಾಡುತ್ತಿರುವ ನಿಮಗೆ ದೇವರೇ ಬುದ್ಧಿ ಕಲಿಸುತ್ತಾನೆ ನೋಡಿರಿ ಎಂದು ಪೋಸ್ಟ್ ಮಾಡಿದ್ದಾರೆ.


ಮುಡಿ ಮಾಡಲು ಟಿಕೆಟ್ ಮಾತ್ರ ಪಡೆಯಬೇಕು ಹೆಚ್ಚಿನ ಹಣ ಕೇಳುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಈ ಕೂಡಲೇ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿ ಸೂಚನೆ ನೀಡುತ್ತೇನೆ.

ಕಾತ್ಯಾಯಿನಿ ದೇವಿ

ಕಾರ್ಯದರ್ಶಿಗಳು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!