ಮಡಿಕೇರಿ: ಇಲ್ಲಿನ ಕಕ್ಕಬೆ ಕುಂಜಿಲದಲ್ಲಿ ಇಂದು ವರ್ಷದ ಚೊಚ್ಚಲ ವರ್ಷಧಾರೆಯಾಗಿದ್ದು, ಅನ್ನದಾತರ ಮೊಗದಲ್ಲಿ ಮಂದಹಾಸ ಮನೆಮಾಡಿದೆ.
ಇಂದು ವರ್ಷದ ಮೊದಲ ಮಳೆ ಸುರಿದ ಪರಿಣಾಮ ಕಳೆದ ಕೆಲ ದಿನಗಳಿಂದ ಕಾದು ಬಸವಳಿದಿದ್ದ ಭೂಮಿಗೆ ತಂಪೆರೆದಂತಾಗಿದೆ. ಸಂಜೆಯ ವೇಳೆಗೆ ಆರಂಭವಾದ ಮಳೆಯು ಒಂದು ಗಂಟೆಗೂ ಹೆಚ್ಚು ಕಾಲ ಸುರಿದಿದೆ.
ಮಳೆಯ ಆಗಮನದಿಂದ ಅನ್ನದಾತರು ಹಾಗೂ ಕೊಡಗು ಜನತೆಯ ಮೊಗದಲ್ಲಿ ಮಂದಹಾಸ ಮನೆಮಾಡಿದ್ದು, ಮುಂದಿನ ದಿನಗಳಲ್ಲೂ ಇದೇ ರೀತಿ ಮಳೆಯಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.