Mysore
25
scattered clouds

Social Media

ಮಂಗಳವಾರ, 18 ಆಗಸ್ಟ್ 2026
Light
Dark

ಈಗಿರುವ ಬಿಜೆಪಿ ನಾಯಕರಿಗೆ ಮೆಚ್ಯುರಿಟಿ ಇಲ್ಲ: ಸಚಿವ ಭೋಸರಾಜು ವ್ಯಂಗ್ಯ

ಮಡಿಕೇರಿ: ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಮೆಚ್ಯುರಿಟಿ ಇಲ್ಲ ಅಂತಾ ಬಿಜೆಪಿಯವರೇ ಹೇಳುತ್ತಾರೆ ಎಂದು ಸಚಿವ ಭೋಸರಾಜು ವ್ಯಂಗ್ಯವಾಡಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ಸಿಎಂ ಅವರೇ ಹಣ ಸಂಗ್ರಹಿಸಿ ಮಹಾರಾಷ್ಟ್ರ ಚುನಾವಣೆ ಹಣ ಕಳುಹಿಸಿದ್ದಾರೆ. ಇನ್ಮುಂದೆ ಅಸ್ಸಾಂ ಚುನಾವಣೆಗೆ ಕಳುಹಿಸಲಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈಗಿರುವ ಬಿಜೆಪಿ ನಾಯಕರಿಗೆ ಮೆಚ್ಯುರಿಟಿ ಇಲ್ಲ. ಆರ್ ಅಶೋಕ್ ಅವರಿಗೆ ಆಗಲಿ, ವಿಜಯೇಂದ್ರ ಅವರಿಗೆ ಮೆಚ್ಯುರಿಟಿ ಇಲ್ಲ. ರಾಜಕಾರಣಿಗಳು ಏನಾದರೂ ಮಾತನಾಡಿದರು ಎಂದರೆ ಅದಕ್ಕೆ ಒಂದು ಘನತೆ ಇರಬೇಕು ಎಂದು ಆರ್.‌ಅಶೋಕ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅವರಿಗೆ ತಮ್ಮ ಪಕ್ಷದಲ್ಲಿ ಏನು ಆಗುತ್ತದೆ ಎನ್ನುವುದು ಗೊತ್ತಿಲ್ಲ ಅವರ ಪಕ್ಷ ದಲ್ಲಿರುವ ಹುಳುಕುಗಳನ್ನು ಸರಿಮಾಡಿಕೊಳ್ಳಲು ಆಗಲ್ಲ. ಶ್ರೀರಾಮುಲು, ರೆಡ್ಡಿ ಪಾದಯಾತ್ರೆ ಮಾಡುತ್ತೇವೆ ಅಂತಾರೆ. ಆದರೆ ಇವರು ಅದಕ್ಕೆ ಹೈಕಮಾಂಡ್ ಒಪ್ಪಿಗೆ ಬೇಕು ಅಂತಾರೆ. ಹೀಗಿರುವಾಗ ನಮ್ಮ ಪಕ್ಷದ ಬಗ್ಗೆ ಏನು ಮಾತನಾಡುವುದು. ಕೇಂದ್ರ ಸರ್ಕಾರದಿಂದ ಬರಬೇಕಾಗಿರುವ ಅನುದಾನದ ಬಗ್ಗೆ ಒಬ್ಬ ಕೇಂದ್ರ ಸಚಿವನೂ ಮಾತನಾಡಲ್ಲ. ಜೋಳ, ಕಬ್ಬು ಅವುಗಳ ಎಂಎಸ್ ಪಿ ಬಗ್ಗೆ ಮಾತನಾಡಲ್ಲ. ಅದು ಬಿಟ್ಟು ಬೆಳಿಗ್ಗೆಯಿಂದ ಸಂಜೆವರೆಗೆ ನಮ್ಮ ಸರ್ಕಾರದ ವಿರುದ್ಧ ಬೊಗಳುತ್ತಾರೆ. ಅವರಿಗೆ ತಾಕತ್ತಿದ್ದರೆ ಕೇಂದ್ರದಿಂದ ಬರಬೇಕಾಗಿರುವ ಅನುದಾನ ಕೊಡಿಸಲಿ ಎಂದು ಸವಾಲು ಹಾಕಿದರು.

 

 

Tags:
error: Content is protected !!