Mysore
33
overcast clouds

Social Media

ಶನಿವಾರ, 12 ಸೆಪ್ಟೆಂಬರ್ 2026
Light
Dark

ಹುಣಸೂರು : ಆದಿವಾಸಿ ಕುಟುಂಬದ ಮೇಲೆ ಹಲ್ಲೆ

ಹುಣಸೂರು: ತಾಲ್ಲೂಕಿನ ಕಿರಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಹಳ್ಳಿಯಲ್ಲಿ ಆದಿವಾಸಿ ಜೇನುಕುರುಬ ಕುಟುಂಬದ ಗಂಗಮ್ಮ ಮತ್ತು ಶಿವಣ್ಣ ಎಂಬವರ ಮೇಲೆ ಸ್ವಾಮಿಗೌಡ, ಅವರ ಪತ್ನಿ ವಸಂತಕುಮಾರಿ ಹಾಗೂ ಮಗ ಪವನಕುಮಾರ್ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫೆ.15ರಂದು ರಾತ್ರಿ ಹಾಡಿಯ ಆದಿವಾಸಿ ಜೇನುಕುರುಬ ಕುಟುಂಬದ ಗಂಗಮ್ಮ ಮತ್ತು ಶಿವಣ್ಣ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಹುಣಸೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪವನ್ ಕುಮಾರ್ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ತಲೆಮರೆಸಿಕೊಂಡಿರುವ ಸ್ವಾಮಿಗೌಡ ಮತ್ತು ಅವರ ಪತ್ನಿ ವಸಂತಕುಮಾರಿ ಅವರನ್ನು ಹುಡುಕುತ್ತಿದ್ದಾರೆ. ಗಾಯಾಳುಗಳು ಹುಣಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!