Mysore
21
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಕನಕದಾಸ ಜಯಂತಿಯಲ್ಲಿ ಗಮನಸೆಳೆದ ಮೆರವಣಿಗೆ 

ಮೈಸೂರು: ಸಂತ ಶ್ರೇಷ್ಠ, ದಾರ್ಶನಿಕ ಶ್ರೀ ಭಕ್ತ ಕನಕದಾಸರ 535ನೇ ಜಯಂತ್ಯುತ್ಸವದ ಅಂಗವಾಗಿ ಮೈಸೂರಿನಲ್ಲಿ ಕನಕದಾಸರ ಉತ್ಸವ ಮೂರ್ತಿಯನ್ನು ಅದ್ಧೂರಿ ಮೆರವಣಿಗೆ ನಡೆಸಲಾಯಿತು.

ನಂಜರಾಜ ಬಹದ್ದೂರ್ ಛತ್ರದ ಬುಧವಾರದ ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ಎಚ್.ಎಚ್.ವಿಶ್ವನಾಥ್, ಕಾಗಿನೆಲೆ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. 

ನಂತರ ಇನ್ನೂರಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭ ಕಳಸ ಹೊತ್ತು ಸಾಗಿದರು. ಬೀರದೇವರ ಕುಣಿತ, ಕಂಸಾಳೆ, ಗೊರವನ ಕುಣಿತ, ಸತ್ತಿಗೆ ಸೂರಪಾನಿ, ಡೊಳ್ಳು ಕುಣಿತ, ನಗಾರಿ, ವೀರಭದ್ರನ ಕುಣಿತ, ಕರಡಿ ಮಜಲು ಕಲಾವಿದರು ದಾರಿಯ ನೃತ್ಯ ಪ್ರದರ್ಶಿಸಿದರು. ತೆರೆದ ವಾಹನದಲ್ಲಿ ಅಲಂಕೃತ ಕನಕದಾಸರ ಮೂರ್ತಿಗಳು ಸಾಗಿದವು. 

ಕನಕದಾಸ ಯುವ ಬಳಗದವರು ಕುರುಬನ ರಾಣಿ, ಕವಿರತ್ನ ಕಾಳಿದಾಸ ಚಿತ್ರದ ಮೊದಲಾದ ಚಿತ್ರಗಳಿಗೆ ನೃತ್ಯ ಪ್ರದರ್ಶಿಸಿ ಮತ್ತಷ್ಟು ರಂಗು ತುಂಬಿದರು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರಪಾಲಿಕೆ ಸದಸ್ಯ ಜೆ.ಗೋಪಿ, ವಾಜಿ ಮಹಾಪೌರರಾದ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಟಿ.ಬಿ.ಚಿಕ್ಕಣ್ಣ, ನಗರಪಾಲಿಕೆ ಮಾಜಿ ಸದಸ್ಯ ಎಂ.ಸಿ.ಚಿಕ್ಕಣ್ಣ, ಹಿನಕಲ್ ಪ್ರಕಾಶ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಶಿವರಾಮು ಮತ್ತಿತರರು ಪಾಲ್ಗೊಂಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!