Mysore
22
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಹನೂರು : ಮಳೆಗೆ ಕುರುಬರದೊಡ್ಡಿ ಗ್ರಾಮ ಜಲಾವೃತ

ಹನೂರು : ಗುರುವಾರ ತಡರಾತ್ರಿ ಸುರಿದ ಬಾರಿ ಮಳೆಗೆ ಕುರುಬರದೊಡ್ಡಿ ಗ್ರಾಮದ ಕೆರೆ ತುಂಬಿ ಕೋಡಿ ಬಿದ್ದ ಪರಿಣಾಮ ಮನೆಗಳಿಗೆ ನೀರು ನುಗ್ಗಿರುವ ಘಟನೆ ಜರುಗಿದೆ.

ಅಜ್ಜೀಪುರ ಹಾಗೂ ಸೂಳೇರಿಪಾಳ್ಯ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿ ಭಾರಿ ಮಳೆಯಾದ ಹಿನ್ನೆಲೆ ಹಾಗೂ ಉಡುತೊರೆಹಳ್ಳ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಟ್ಟಿರುವ ಹಿನ್ನೆಲೆ ತಾಲೂಕಿನ  ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಕುರುಬರದೊಡ್ಡಿ ಗ್ರಾಮದ ನಾಲ್ಕನೇ ವಾರ್ಡ್ ನ ಮನೆಗಳಿಗೆ ನೀರು ನುಗ್ಗಿ ದಿನಸಿ ಪದಾರ್ಥಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳು ನಾಶಗೊಂಡಿವೆ.

ಮನೆಗಳಿಗೆ ಹಾನಿ : ಕುರುಬರದೊಡ್ಡಿ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಪುಟ್ಟಮ್ಮ,ಶಿವಣ್ಣ, ಹುಚ್ಚಮ್ಮ, ಲಕ್ಷ್ಮಣ, ಚಜ್ಜೆಗೌಡರು, ಕೆಂಪಮ್ಮ,ಇವರುಗಳ ಮನೆಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದು ಬಾರಿ ಪ್ರಮಾಣದಲ್ಲಿ ಹಾನಿಯಾಗುವ ಮುನ್ಸೂಚನೆ ಇದೆ ಅಲ್ಲದೆ ಪ್ರತಿ ಬಾರಿ ಮಳೆಯಾದಾಗ ಈ ರೀತಿಯಲ್ಲಿ ಘಟನೆ ಮರುಕಳಿಸುತ್ತಿದೆ ಆದರೂ ಎಚ್ಛೆತ್ತುಕೊಳ್ಳುತ್ತಿಲ್ಲ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಡರಾತ್ರಿ ಮನೆಗಳಿಗೆ ನೀರು ನುಗ್ಗಿದ್ದರು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಆದರೆ ಮನೆಯೊಳಗೆ ಮೂರರಿಂದ 4 ಅಡಿ ನೀರು ತುಂಬಿರುವುದರಿಂದ ಮುಂಜಾನೆಯಿಂದಲೂ ನೀರನ್ನು ಹೊರಗೆ ಹಾಕುವುದೇ ಆಗಿದೆ ಆದರೇ ಇನ್ನೂ ನೀರು ನಿಲ್ಲುತ್ತಿಲ್ಲ ನಮ್ಮ ಮನೆಗೆ ಹಾನಿಯಾಗಿದೆ ಈಗಾಗಲೇ ಒಂದು ಕಡೆ ಗೋಡೆ ಕುಸಿದಿದೆ ಎಂದು ಗ್ರಾಮದ ಹುಚ್ಚಮ್ಮ ಅಳಲನ್ನು ತೋಡಿಕೊಂಡಿದ್ದಾರೆ.


ಅಪಾರ ಪ್ರಮಾಣದ ಮಳೆ ಬಿದ್ದರೆ ನಮ್ಮ ಮನೆಗಳಿಗೆ ಪದೇ ಪದೇ ಈ ರೀತಿ ನೀರು ನುಗ್ಗುತ್ತಿದೆ ಇದಕ್ಕೆ ಸಂಬಂಧ ಪಟ್ಟಂತೆ ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಪ್ರಯೋಜನವಾಗಿವಿಲ್ಲ,ಶೀಘ್ರವೇ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ.

ಶಂಕರ್
ಕುರುಬರದೊಡ್ಡಿ ನಿವಾಸಿ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!