ಮೈಸೂರು : ಜಿಲ್ಲಾ ಮತ್ತು ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘದ ವತಿಯಿಂದ ನಗರಪಾಲಿಕೆ ಸದಸ್ಯ ಪ್ರಮೀಳಾ ಭರತ್ ಅವರ ನೇತೃತ್ವದಲ್ಲಿ ಇಂದು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ ಹೋರಾಟಗಾರರ ಉದ್ಯಾನವನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಸಂಚಾಲಕರಾದ ಯೋಗಾನಂದ, ಕಾರ್ಯದರ್ಶಿಗಳಾದ ಶೇಷಾದ್ರಿ, ಹೋಟೆಲ್ ಉದ್ಯಮಿಗಳಾದ ಸಿದ್ದಿ, ಬಿಜೆಪಿ ಕಾರ್ಯಕರ್ತರಾದ ವಿಜ್ಞೇಶ್ವರ ಭಟ್, ಸುದರ್ಶನ್, ಶ್ರೀನಿವಾಸ್, ಗೋಪಿ, ಆನಂದ, ಪಾಪಣ್ಣ, ನರಸಿಂಹ, ಪ್ರಸಾದ್, ಜ್ಯೋತಿ ,ಸುಕನ್ಯ, ಕೀರ್ತನ, ಮೇಘನಾ, ಮಾನ್ಯ ಇತರರು ಉಪಸ್ಥಿತರಿದ್ದರು.