ಮೈಸೂರು : ನಗರದ ಚಾಮುಂಡಿ ಬೆಟ್ಟದಲ್ಲಿಂದು ಚಾಮುಂಡೇಶ್ವರಿ ಮಹಾರಥೋತ್ಸವವು ಅದ್ದೂರಿಯಾಗಿ ನಡೆಯಿತು. ಮಹಾರಥೋತ್ಸವಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಲನೆ ನೀಡಿದರು.

ಜಂಬೂಸವಾರಿ ಬಳಿಕ ಮೊದಲ ಹುಣ್ಣಿಮೆಯಲ್ಲಿ ಬೆಟ್ಟದಲ್ಲಿ ಜರುಗುವ ಮಹಾರಥೋತ್ಸವವು ಇಂದು ಬೆಳಿಗ್ಗೆ 7.50 ರಿಂದ 8.10ರೊಳಗೆ ಸಲ್ಲುವ ಶುಭ ಘಳಿಗೆಯಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಹಾರಥೋತ್ಸವದಲ್ಲಿ ರಾಜಮಾತೆ ಪ್ರಮೋದದೇವಿ ಒಡೆಯರ್, ಮಹಾರಾಜ ಯಧುವೀರ್, ತ್ರಿಷಿಕಾ ಒಡೆಯರ್ ಸೇರಿದಂತೆ ಸಾವಿರಾರು ಭಕ್ತರು, ಕಲಾತಂಡಗಳು ಭಾಗವಹಿಸಿದ್ದವು, ಸಿಎಆರ್ ಸಿಬ್ಬಂದಿ ಕುಶಾಲತೋಪ ಸಿಡಿಸಿ ಗೌರವ ಸಲ್ಲಿಸಿದರು.
ಇದರ ಜೊತೆಗೆ ಇಂದಿನಿಂದ ಅ. 14 ರವರೆಗೆ ನಾಡ ದೇವತೆಗೆ ವಿಶೇಷ ಪೂಜೆ ,ಹೋಮ ಹವನಗಳು ನಡೆಯಲಿವೆ.





