Mysore
23
scattered clouds

Social Media

ಶುಕ್ರವಾರ, 27 ಫೆಬ್ರವರಿ 2026
Light
Dark

ಹನೂರು| ಚಿರತೆ ದಾಳಿಗೆ ಹಸು ಬಲಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು : ಚಿರತೆ ದಾಳಿಗೆ ಹಸುವೊಂದು ಬಲಿಯಾಗಿರುವ ಘಟನೆ ರಾಮಾಪುರ ಸಮೀಪದ ಅಪ್ಪಿ ಕುಳಿ ಬಳಿ ಗುರುವಾರ ತಡರಾತ್ರಿ ಜರುಗಿದೆ.

ರಾಮಾಪುರ ಗ್ರಾಮದ ಕಂದ ಎಂಬ ರೈತನೇ ಹಸು ಕಳೆದುಕೊಂಡ ರೈತನಾಗಿದ್ದಾರೆ.

ಘಟನೆ ವಿವರ: ರಾಮಾಪುರ ಭಾಗದಲ್ಲಿ ಹಸುಗಳನ್ನು ಮೇಯಿಸಲು ಕಾಡಿನಲ್ಲಿ ಬಿಟ್ಟು ಬರುವುದು ವಾಡಿಕೆ. ಹಾಗೆಯೇ ಹಸುಗಳು ಮರಳಿ ಸಂಜೆ ವೇಳೆ ಬರುವ ವೇಳೆಗೆ ಜಮೀನಿನ ಸಮೀಪದಲ್ಲಿ ಹಸು ಮೇಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಚಿರತೆ ದಾಳಿ ನಡೆಸಿ ಹಸುವನ್ನು ಕೊಂದು ತಿಂದು ಹಾಕಿದೆ. ಹೀಗಾಗಿ ರೈತ ಕಂದನಿಗೆ ಸಾವಿರಾರು ರೂ ನಷ್ಟ ಉಂಟಾಗಿದೆ.

ಚಿರತೆ ದಾಳಿ ಮೊದಲಲ್ಲ: ಈ ಭಾಗದಲ್ಲಿ ಆಗಿಂದಾಗೆ ಚಿರತೆ ದಾಳಿ ಮಾಡುತ್ತಿದ್ದೂ ಸಾಕು ಪ್ರಾಣಿಗಳಾದ ನಾಯಿ, ಮೇಕೆ ಕುರಿ ತಿನ್ನುತ್ತಿದೆ. ಹಾಗಾಗಿ ಚಿರತೆ ದಾಳಿ ಈ ಭಾಗದಲ್ಲಿ ಮಿತಿ ಮೀರಿದ್ದು ತೋಟದ ಮನೆಗಳ ಜನರು ಭಯ ಭೀತರಾಗಿದ್ದಾರೆ. ಹಾಗಾಗಿ ಚಿರತೆ ಸೆರೆ ಹಿಡಿದು ಬೇರೆಡೆ ಸ್ಥಳಾಂತರ ಮಾಡಿ ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

ಪರಿಹಾರ ನೀಡಿ: ಸುಮಾರು 30 ಸಾವಿರ ರೂ ಬೆಲೆ ಬಾಳುವ ಹಸುವನ್ನು ಕಳೆದುಕೊಂಡ ರೈತ ಸಾಲದ ಸುಳಿಯಲ್ಲಿ ಸಿಲುಕಿದಂತಾಗಿದೆ. ಹಾಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ಪರಿಹಾರ ನೀಡಬೇಕು ಎಂದು ರೈತ ಕಂದ ಆಗ್ರಹ ಮಾಡಿದ್ದಾರೆ.

 

Tags:
error: Content is protected !!