ಕೊಳ್ಳೇಗಾಲ: ತಾಲ್ಲೂಕಿನ ಜಕ್ಕಳ್ಳಿ ಬಳಿ ಚಿರತೆ ನಾಯಿಯೊಂದನ್ನು ಕೊಂದು ತಿಂದುಹಾಕಿದ್ದು, ಗ್ರಾಮಸ್ಥರು, ಕೂಲಿ ಕಾರ್ಮಿಕರು ಭಯಭೀತರಾಗಿದ್ದಾರೆ.
ವೀರಮಾದು ಅವರ ತೋಟದ ಬಳಿ ಚಿರತೆ ನಾಯಿಯನ್ನು ಕೊಂದು ಅರೆಬರೆ ತಿಂದುಹಾಕಿದೆ. ಅಲ್ಲದೇ ಜಮೀನು ಸುತ್ತಮುತ್ತಲೂ ಅದು ಅಡ್ಡಾಡಿರುವ ಹೆಜ್ಜೆ ಗುರುತುಗಳು ಕಂಡು ಬಂದಿವೆ.
ವಿಚಾರ ತಿಳಿದ ತಕ್ಷಣ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಈ ಮೊದಲು ಅಳವಡಿಸಿದ್ದ ಬೋನನ್ನು ಈಗ ಕೃತ್ಯ ನಡೆದಿರುವ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.




