ಚಾಮರಾಜನಗರ : ಅರಣ್ಯ ಅಧಿಕಾರಿಗಳ ಗಸ್ತಿನ ವೇಳೆ ಒಂಟಿ ಸಲಗವೊಂದು ಎದುರಾಗಿದ್ದು ಅರಣ್ಯ ಇಲಾಖೆಯ ಜೀಪನ್ನು ನೋಡಿ ಹಿಮ್ಮುಖವಾಗಿ ಓಡಿಹೋಗಿದೆ.
ಈ ಘಟನೆ ಬಂಡಿಪುರದಲ್ಲಿ ನಡೆದಿದಿದೆ ಎಂದು ಹೇಳಲಾಗುತ್ತಿದೆ. ಜೀಪ್ ಬರುತ್ತಿರುವುದನ್ನು ಗಮನಿಸಿದ ಕಾಡಾನೆ ಹಿಮ್ಮುಖವಾಗಿ ಹೆಜ್ಜೆ ಹಾಕಿ ಓಡಿದೆ. ಅರಣ್ಯಾಧಿಕಾರಿಗಳು ಗಸ್ತಿನಲ್ಲಿರುವಾಗ ಈ ಒಂಟಿ ಸಲಗ ಎದುರಾಗಿದೆ. ಈ ವೇಳೆ ಜೀಪ್ನ ಚಾಲಕ ವಾಹನದ ಆಕ್ಸಿಲೆಟರ್ ರೈಸ್ ಸದ್ದು ಮಾಡುತ್ತಿದ್ದಂತೆ ಆನೆ ಹೆದರಿ ಪರಾರಿಯಾಗಿದೆ.