Mysore
22
overcast clouds

Social Media

ಮಂಗಳವಾರ, 30 ಜೂನ್ 2026
Light
Dark

ಚಾ.ನಗರ; ಚಂದಕವಾಡಿ ಭಾಗದಲ್ಲಿ ಭೂಕಂಪ

ಚಾಮರಾಜನಗರ: ತಾಲ್ಲೂಕಿನ ಚಂದಕವಾಡಿ ಹೋಬಳಿ ಭಾಗದಲ್ಲಿ ಮಂಗಳವಾರ 8 ಗಂಟೆ ಸಮಯ ಭೂಮಿ ಕಂಪಿಸಿದ ಅನುಭವ ಉಂಟಾಗಿದ್ದು ಈ ಭಾಗದ ಜನರು ಭಯಭೀತರಾಗಿದ್ದಾರೆ.

ಚಾ.ನಗರ ತಾಲ್ಲೂಕಿನ ಚಂದಕವಾಡಿ ಹೋಬಳಿಯ ಬಸಪ್ಪನ ಪಾಳ್ಯ ಹಾಗೂ ಇತರೆ ಗ್ರಾಮಗಳಲ್ಲಿ ಭೂ ಕಂಪನ ಉಂಟಾಗಿದ್ದು ರಾತ್ರಿ 8 ರ ಸಮಯದಲ್ಲಿ ಮೂರು ಬಾರಿ ಭೂಮಿ ಕಂಪಿಸಿದ ಅನುಭವ ಉಂಟಾಗಿದ್ದು ಅಂಗಡಿ, ಮನೆಗಳಿಂದ ಜನರು ಭಯಭೀತರಾಗಿ ಹೊರಗೆ ಬಂದ ಘಟನೆ ನಡೆದಿದೆ.

ಬಸಪ್ಪನ ಪಾಳ್ಯ ಗ್ರಾಮದ ಹರ್ಷ ಎಂಬ ವ್ಯಕ್ತಿ ಆಂದೋಲನ ದೊಂದಿಗೆ ಮಾತನಾಡಿ ಕೆಲವು ಸಮಯ ನಾವು ಇದ್ದ ಸ್ಥಳದಿಂದ ಎಸೆದಂತಹ ಅನುಭವ ಉಂಟಾಗಿದ್ದು ಈ ಭಾಗದಲ್ಲಿ ಈ ತರಹದ ಅನುಭವ ಇದೇ ಮೊದಲು ಎಂದು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!