ನಂಜನಗೂಡು : ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕಿನ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಟ್ಟಣದ ಹೊರವಲಯದ ವಿದ್ಯಾಪೀಠದ ಬಳಿ ಇಂದು ಸಂಜೆ ನಡೆದಿದೆ.
ಸಾವಿಗೀಡಾದವರನ್ನು ಚಾಮರಾಜನಗರ ತಾಲೂಕಿನ ಹೆಗ್ಗೊಟರ ಗ್ರಾಮದ ಮಹೇಶ್ ನಾಗಣ್ಣ (40 ವರ್ಷ), ಹಾಗೂ ಮಹದೇವ ನಾಗರಾಜು (50 ವರ್ಷ) ಎಂದು ಗುರುತಿಸಲಾಗಿದೆ. ಎದುರಿನಿಂದ ಬರುವಾಗ ಡಿಕ್ಕಿಯಾದ ಕಾರು ಇಬ್ಬರ ಸಾವಿಗೆ ಕಾರಣರಾದ ಕಾರಿನ ಚಾಲಕ ಜಲಸಂಪನ್ಮೂಲ ಇಲಾಖೆ ಇಂಜಿನಿಯರ್ ನಟೇಶ್ ಅವರು ತಾವೇ ನಂಜನಗೂಡು ಠಾಣೆಗೆ ಶರಣಾಗಿದ್ದಾರೆ.
ನಂಜನಗೂಡಿನಲ್ಲಿ ಕೆಲಸ ಮುಗಿಸಿ ಊರು ಕಡೆ ಹೊರಟಿದ್ದ ಮಹೇಶ್ ಹಾಗೂ ಮಹದೇವ ಅವರ ಬೈಕಿಗೆ ಫಾರಂ ಹೌಸ್ ಗೆ ಹೋಗಿ ವಾಪಸ್ ಆಗುತ್ತಿದ್ದವರಿಗೆ ಕಾರು ನಂಜನಗೂಡು ಚಾಮರಾಜನಗರ ರಸ್ತೆಯಲ್ಲಿರುವ ವಿದ್ಯಾಪೀಠದ ಬಳಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಬೇರೆ ಬೇರೆ ಕಡೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಿಂದಾಗಿ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಕಾರು ಕೂಡ ಮತ್ತೊಂದು ಕಡೆ ಹೋಗಿ ನಿಂತಿದೆ. ಸ್ಥಳಕ್ಕೆ ನಂಜನಗೂಡು ಪೊಲೀಸ್ ಅಧಿಕಾರಿಗಳಾದ ಲಕ್ಷ್ಮಿಕಾಂತ ತಳವಾರ್, ಯಾಸ್ಮಿನ್ ತಾಜ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ..