Mysore
21
overcast clouds
Light
Dark

ಚಾ.ನಗರ : ಸೇತುವೆ ಮೇಲೆ ನೀರು ; ಕೊಚ್ಚಿ ಹೋದ ತೆಂಗಿನ ಕಾಯಿಗಳು

ಚಾಮರಾಜನಗರ: ಭಾನುವಾರ ರಾತ್ರಿ ಸುರಿದ ಭರ್ಜರಿ ಮಳೆಯಿಂದ ಸುವರ್ಣಾವತಿ ಜಲಾಶಯದಿಂದ ಹೊರ ಹರಿವು ಹೆಚ್ಚಾಗಿದ್ದು, ತಾಲ್ಲೂಕಿನ ಆಲೂರು-ಕೂಡ್ಲೂರು ರಸ್ತೆಯ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಸಂಚಾರಕ್ಕೆ ತೊಂದರೆಯಾಗಿದೆ.


ನಿರಂತರ ಮಳೆಯಿಂದ ಜಲಾಶಯ ಈಗಾಗಲೇ ಭರ್ತಿಯಾಗಿದೆ. ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಮತ್ತಷ್ಟು ನೀರು ಸಂಗ್ರಹವಾದ್ದರಿಂದ ಸುಮಾರು ೧೮ ಸಾವಿರ ಕ್ಯೂಸೆಕ್ ನೀರನ್ನು ಹೊಳೆಗೆ ಹರಿಯ ಬಿಡಲಾಗಿದೆ.
ಹೊಳೆ ಉಕ್ಕಿ ಹರಿಯುತ್ತಿದ್ದು ಆಲೂರು ಗ್ರಾಮದ ತೋಟಗಳಿಗೆ ನೀರು ತೆಂಗಿನ ಕಾಯಿಗಳನ್ನು ಕೊಚ್ಚಿಕೊಂಡು ಹೋಗುತ್ತಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ