ಎಚ್ ಡಿ ಕೋಟೆ: ತಾಲೂಕಿನ ಅಂತರ ಸಂತೆ ಹೋಬಳಿಯ ಹೊಸಹೂಳಲು ಗ್ರಾಮದ ನಿಂಗೇಗೌಡ ಸುಮಾರು 70 ವರ್ಷದ ರೈತ ನಾಲ್ಕು ಎಕರೆ ಜಮೀನು ಹೊಂದಿದ್ದು ಕಬ್ಬಿನ ಬೆಳೆಗೆ ಬೆಳೆ ಸಾಲಕ್ಕೆ ಅಂತ ರ ಸಂತೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ಗೆ ಅರ್ಜಿ ಹಾಕಿದ್ದು ನಿಮಗೆ ಸಾಲ ಕೊಡಲು ಬರುವುದಿಲ್ಲ ಎಂದು ತಿಳಿಸಿ ನೋಟಿಸ್ ಕೊಟ್ಟ ಕಾರಣ ಬೇಸರ ಗೊಂಡು ರೈತ ನಿಂಗೇಗೌಡ ಇಂದು ಮಧ್ಯಾಹ್ನ ಬ್ಯಾಂಕ್ ಗೆ ಬಂದು ವಿಷ ಸೇವಿಸಿ ಅಸ್ವಸ್ಥರಾಗಿ ವಾಂತಿ ಮಾಡಿಕೊಂಡು ಒದ್ದಾಡುತ್ತಿದ್ದಾಗ ಬ್ಯಾಂಕಿನ ಸಿಬ್ಬಂದಿ ಅವರ ಮಗನಿಗೆ ಕರೆ ಮಾಡಿ ತಿಳಿಸಿದರು ,ಬ್ಯಾಂಕಿಗೆ ಬಂದ ಅವರ ಮಗ ತಂದೆಯನ್ನು ಎಚ್ ಡಿ ಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಪ್ರಾಥಮಿಕ ಹಂತದ ಚಿಕಿತ್ಸೆ ಮಾಡಿಸಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.





