Mysore
23
overcast clouds

Social Media

ಭಾನುವಾರ, 14 ಜೂನ್ 2026
Light
Dark

1.26 ಲಕ್ಷ ರೂ. ಮೌಲ್ಯದ ಮದ್ಯ ನಾಶ

ಚಾಮರಾಜನಗರ: ಸೇವೆನೆಗೆ ಯೋಗ್ಯವಲ್ಲದ ಹಾಗೂ ಅವಧಿ ಮೀರಿದ ಸುಮಾರು 1.26 ಲಕ್ಷ ರೂ. ಮೌಲ್ಯದ ಮದ್ಯವನ್ನು ನಾಶಪಡಿಸಲಾಯಿತು.
ಸಮೀಪದ ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿರುವ ಪಾನೀಯ ನಿಗಮದ ಗೋದಾಮಿನ ಅವರಣದಲ್ಲಿ ತಹಸಿಲ್ದಾರ್ ಬಸವರಾಜು ನೇತೃತ್ವದಲ್ಲಿ  375.32 ಲೀಟರ್ ಮದ್ಯವನ್ನು ನೆಲಕ್ಕೆ ಸುರಿಯುವ ಮೂಲಕ ನಾಶಪಡಿಸಲಾಯಿತು. ಇದರಲ್ಲಿ  336. 32 ಲೀಟರ್ ಬಿಯರ್, 9.00 ಲೀಟ್ ವೈನ್ಸ್ ಸೇರಿತ್ತು.
ಅಬಕಾರಿ ಉಪ ಅಧೀಕ್ಷಕ ಎಂ.ಡಿ.ಮೋಹನ್‌ಕುಮಾರ್, ಅಬಕಾರಿ ಇನ್‌ಸ್ಪೆಕ್ಟರ್ ಟಿ.ಪಿ.ಗುರುನಾಥಶೆಟ್ಟಿ, ನಿರೀಕ್ಷಕ ಉಮಾಶಂಕರ್, ನಿಗಮದ ವ್ಯವಸ್ಥಾಪಕ ಆರ್.ಬಿ. ಬಸವರಾಜು, ಗ್ರಾಮ ಆಡಳಿತಾಧಿಕಾರಿ ಸರಸ್ವತಿ ಗೋಂಧಕರ, ಸಿಬ್ಬಂದಿಗಳಾದ ರವಿ, ಸಿದ್ದರಾಜು, ಕುಮಾರ್ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!