ಬೆಂಗಳೂರು: ಆಡಳಿತಕ್ಕೆ ಮತ್ತೆ ಚುರುಕು ಮುಟ್ಟಿಸಿರುವ ರಾಜ್ಯ ಸರ್ಕಾರ ಸೋಮವಾರ 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಕಳೆದ ಹಲವು ದಿನಗಳಿಂದ ಆಡಳಿತ ವರ್ಗದಲ್ಲಿ ಹಲವು ಸುಧಾರಣೆಗಳನ್ನು ಮಾಡಲು ಮುಂದಾಗಿರುವ ಸರ್ಕಾರ ಐಎಎಸ್ ಹಾಗೂ ಐಪಿಎಸ್ ಮಟ್ಟದಲ್ಲಿ ಭಾರೀ ಬದಲಾವಣೆ ಮಾಡುತ್ತಿದೆ. ಈ ಸಂಬಂಧ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಅವುಗಳ ವಿವರ ಇಲ್ಲಿದೆ.
ವರ್ಗಾವಣೆಗೊಂಡಿರುವ ಅಧಿಕಾರಿಗಳು
ಜಾವೇದ್ ಅಖ್ತರ್: ಎಸಿಎಸ್, ಆರೋಗ್ಯ ಇಲಾಖೆ (ವೈದ್ಯಕೀಯ ಶಿಕ್ಷಣ)
ಬಿ.ಸಿ.ಸತೀಶ್: ಇಡಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್
ಡಾ.ಹೆಚ್.ಎನ್.ಗೋಪಾಲಕೃಷ್ಣ: ಜೆಡಿ, ಮುನ್ಸಿಪಲ್ ಡಾಟಾ ಸೊಸೈಟಿ
ಡಾ.ಎನ್.ಶಿವಶಂಕರ: ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ
ಅಕ್ರಂ ಪಾಷಾ: ಜಿಲ್ಲಾಧಿಕಾರಿ, ಕೋಲಾರ
ಗಂಗೂಬಾಯಿ ರಮೇಶ್ ಮಾನಕರ್: ಕಾರ್ಯದರ್ಶಿ, ರಾಜ್ಯ ಮಾಹಿತಿ ಆಯೋಗ
ಆರ್.ಲತಾ: ಕಾರ್ಯದರ್ಶಿ, ರಾಜ್ಯ ಮಹಿಳಾ ಆಯೋಗ
ವೆಂಕಟರಾಜು: ಜಿಲ್ಲಾಧಿಕಾರಿ, ಕೊಡಗು
ಫೌಝಿಯಾ ತರನುಮ್: ಜಿಲ್ಲಾಧಿಕಾರಿ, ಕಲಬುರಗಿ
ಎನ್.ಎಂ.ನಾಗರಾಜ್: ಯೋಜನಾ ನಿರ್ದೇಶಕ, ಏಡ್ಸ್ ಪ್ರಿವೆನ್ಷನ್ ಸೊಸೈಟಿ
ಭನ್ವರ್ ಸಿಂಗ್ ಮೀನಾ: ಸಿಇಒ, ಕಲಬುರಗಿ ಜಿಲ್ಲಾ ಪಂಚಾಯಿತಿ
ಜಿ.ಲಿಂಗಮೂರ್ತಿ: ವ್ಯವಸ್ಥಾಪಕ ನಿರ್ದೇಶಕ, ಕೆಆರ್ಡಿಸಿಎಲ್
ಡಾ.ಗಿರೀಶ್ ದಿಲೀಪ್ ಬಾಡೊಲೆ: ಪರೀಕ್ಷಾ ನಿಯಂತ್ರಕ, ಕೆಪಿಎಸ್ಸಿ
ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಶಾ: ಆಯುಕ್ತ, ಹಂಪಿ ವಿಶ್ವ ಹೆರಿಟೇಜ್ ಏರಿಯಾ ನಿರ್ವಹಣಾ ಪ್ರಾಧಿಕಾರ





